HEALTH TIPS

`ಪ್ರಾಣ-ವಾಯು' ನಾಟಕ ಜಿಲ್ಲಾಮಟ್ಟದಲ್ಲಿ ದ್ವಿತೀಯ

       
       ಕುಂಬಳೆ: ಕಾಸರಗೋಡು ಜಿಲ್ಲಾಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಸದಾಶಿವ ಪೊಯ್ಯೆ ನಿರ್ದೇಶನ ಮತ್ತು ಶಾಲೆಯ ಅಧ್ಯಾಪಕ ಶಿವಪ್ರಸಾದ್ ಚೆರುಗೋಳಿ ಸಹನಿರ್ದೇಶನದಲ್ಲಿ ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ `ಪ್ರಾಣ-ವಾಯು' ವಿಜ್ಞಾನ ನಾಟಕವು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಉತ್ತಮ ನಟಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
     ಪ್ರಕೃತಿಯ ತೀವ್ರ ಶೋಷಣೆ, ಬರಡಾಗುತ್ತಿರುವ ಭೂಮಿ, ದಾಹಜಲ ಸಿಗದೆ ಮನುಷ್ಯ-ಮನುಷ್ಯನ ರಕ್ತ ಕುಡಿಯುವ ಜನರು, ಪ್ರಾಣವಾಯುವಿಗಾಗಿ ಪರದಾಡುವ ಸ್ಥಿತಿ, ಅದಿಲ್ಲದೆ ಜನರನ್ನು ಅರ್ಧಾಯುಷ್ಯದಿಂದಲೇ ಕೊಲ್ಲುವ ಮುಂದಿನ ಯುಗದ ಚಿಂತನೆಯೊಂದಿಗೆ ಮುಂದುವರಿಯುವ ನಾಟಕ, ಪ್ರಕೃತಿಯ ನಿಯಮಗಳನ್ನು ಬದಲಾಯಿಸುವ ಸಂಶೋಧನೆ ನಮಗೆ ಬೇಕಾಗಿಲ್ಲ, ಪ್ರಕೃತಿ ಸ್ನೇಹಿ ಸಂಶೋಧನೆಗಳ ಅಗತ್ಯವನ್ನು ಪ್ರಾಣವಾಯು ನಾಟಕದ ಮೂಲಕ ಮನೋಜ್ಞ ಅಭಿನಯದೊಂದಿಗೆ ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾದರು. ನಾಟಕದ ಕಥಾನಾಯಕಿ ಕಾಡ ಹುಡುಗಿ ಬೆಳ್ಳಿಯಾಗಿ ಅಭಿನುಸಿದ ನಿಧಿ ಆರ್. ಶೆಟ್ಟಿ ಉಪಜಿಲ್ಲಾಮಟ್ಟ ಹಾಗೂ ಜಿಲ್ಲಾಮಟ್ಟದಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 
ರಂಗಪರಿಕರಗಳಲ್ಲಿ ರಾಜ್‍ಕುಮಾರ್ ಕಾಟುಕುಕ್ಕೆ, ಶಾಲಾ ಅಧ್ಯಾಪಿಕೆ ವಿದ್ಯಾ ಸರಸ್ವತಿ ಟೀಚರ್ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries