ಕು0ಬಳೆ : ಕೀರ್ತನಕುಟೀರದ ಆಶ್ರಯದಲ್ಲಿ ಕಣಿಪುರ ಶ್ರೀ ಕ್ಷೇತ್ರ ಪರಿಸರದಲ್ಲಿ ನಡೆಯುತ್ತಿರುವ ಹರಿಕಥಾ ಸಪ್ತಾಹದ ಮೂರನೇ ದಿನ ಬುಧವಾರ ಸಂಜೆ ಮಾ.ವೇದಾಂತ್; ಇವರಿಂದ ರಂಗಪ್ರವೇಶ, ಕುಮಾರಿಯರಾದ ಬೇಬಿಲಿಖಿತ, ಚೈತನ್ಯ, ಅರುಣ, ಸುಪ್ರೀತ ಹಾಗೂ ಧನ್ಯಶ್ರೀ ಇವರಿಂದ ಹರಿಕಥೆ ನಡೆಯಿತು.
ಕೊನೆಯ ಅವಧಿಯ ಯಲ್ಲಿ ಶ್ರೀಶವಿಠ್ಠಲದಾಸ್ ಚನ್ನರಾಯಪಟ್ಟಣ ಹಾಸನ ಇವರಿಂದ "ಬಲಿ-ವಾಮನ" ಹರಿಕಥೆ ಜರಗಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ ಉಪ್ಪಳ ಸಹಕರಿಸಿದರು.
ಇಂದಿನ ಕಾರ್ಯಕ್ರಮ:
ಇಂದು(ಅ.18) ಸಂಜೆ 4 ರಿಂದ 5.30ರ ವರೆಗೆ ಅಭಿಜ್ಞಾ ಭಟ್ ಬೊಳುಂಬು ಹಾಗೂ ನಿಶಾ ಅವರಿಂದ ರಂಗಪ್ರವೇಶ, ವೈಭವಿ ಅವರಿಂದ ನೈಷಧ ಸಾರ್ವಭೌಮ ಕಥಾ ಸಂಕೀರ್ತನೆ ಮತ್ತು ಡಾ.ಶ್ರೀಧರ ದಾಸಜೀ ಕುಂಭಾಶಿ ಅವರಿಂದ ಗಣೇಶ ಮಹಿಮೆ ಕಥಾ ಸಂಕೀರ್ತನೆ ನಡೆಯಲಿದೆ.



