HEALTH TIPS

ನೀರ್ಚಾಲಲ್ಲಿ ಸಂಘರ್ಷ ಸ್ಥಿತಿ-ಮದುವೆ ಸಂಭ್ರಮದ ಮರೆಯಲ್ಲಿ ಆಟೋಪ


        ಬದಿಯಡ್ಕ: ಮದುವೆ ಸಂಭ್ರಮವೊಂದಕ್ಕೆ ಆಗಮಿಸಿದ ಗೆಳೆಯರ ಅಪ್ರಬುದ್ಧ ನಡವಳಿಕೆಯಿ0ದ ಸ0ಭ್ರಮ ಸಂಘರ್ಷಕ್ಕೆ ಕಾರಣವಾದ ಘಟನೆ ಭಾನುವಾರ ನೀರ್ಚಾಲಿನಲ್ಲಿ ನಡೆದಿದೆ.
      ನೀರ್ಚಾಲಿನ ಶಾಲಾ ಬಳಿ ನಿವಾಸಿ ಮೊಹಮ್ಮಡ್ ಮೊಹಮ್ಮದ್ ಅಶ್ರಫ್ ಎಂಬವರ ವಿವಾಹ ಭಾನುವಾರ ಪುತ್ತಿಗೆ ಮುಗುವಿನ ತರುಣಿಯೊಂದಿಗೆ ನೆರವೇರಿತ್ತು. ಮಧ್ಯಾಹ್ನ ಭೋಜನದ ಬಳಿಕ 3 ರ ಸುಮಾರಿಗೆ ಮದುಮಗಳ ತವರಿಗೆ ತೆರಳುವ ವೇಳೆ ಮದುಮಗನ ಮಿತ್ರರು ಬದಿಯಡ್ಕ-ಕು0ಬಳೆ ರಸ್ತೆಯಲ್ಲಿ ವಾಹನ ಮೆರವಣಿಗೆ ಮೂಲಕ ಸಾಗುತ್ತಿದ್ದಾಗ ನೀರ್ಚಾಲು ಮೇಲಿನ ಪೇಟೆಯಲ್ಲಿ ಘಟನೆ ನಡೆದಿದೆ. ಮೇಲಿನ ಪೇಟೆಯಲ್ಲಿ ಎದುರು ಭಾಗದಿ0ದ ಬೈಕ್ ಮೂಲಕ ಆಗಮಿಸಿದ ವ್ಯಕ್ತಿ ದಾರಿಗಾಗಿ ನುಗ್ಗಿದ್ದಾನೆಂದೂ, ಉಗುಳಿರುವನೆಂದೂ ಮೆರವಣಿಗೆಯಲ್ಲಿದ್ದವರು ತಡೆದು ಹಲ್ಲೆಗೈಯ್ದರು. ಈ ವೇಳೆ ಸ್ಥಳೀಯ ಯುವಕನೋರ್ವ ಆಗಮಿಸಿದಾಗ ಸಂಘರ್ಷ ಇನ್ನಷ್ಟು ಬಿಗಡಾಯಿಸಿತು. ಬಳಿಕ ಪೋಲೀಸರು ಆಗಮಿಸಿ ಗು0ಪು ಚದುರಿಸಿದರು. ಬದಿಯಡ್ಕ ಪೋಲೀಸರು ದೂರು ದಾಖಲಿಸಿ ತನಿಖೆಗೆ ಚಾಲನೆ ನೀಡಿರುವರು. ಹಲ್ಲೆಗೈದ ಯುವಕರ ಹತ್ತರಷ್ಟು ಮಂದಿಯನ್ನು ಗುರುತಿಸಲಾಗಿದೆ ಎಂದು ಪೋಲೀಸ್ ಮೂಲಗಳಿಂದ ತಿಳಿದುಬಂದಿದೆ. Conflict between two groups over land dispute in hapur

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries