ಬದಿಯಡ್ಕ: ಪೆರಡಾಲ ಕೊರಗ ಕಾಲನಿಯಲ್ಲಿ ನವಜೀವನ ಶಾಲೆಯ ಎನ್.ಎಸ್.ಎಸ್. ಘಟಕ ಹಾಗೂ ಜನಮೈತ್ರಿ ಪೆÇಲೀಸ್ನ ಅಧೀನದಲ್ಲಿ ನಡೆಯುತ್ತಿರುವ ವಿದ್ಯುತ್ತೀಕರಣ ಕೆಲಸಗಳ ಅವಲೋಕನ ಸಭೆ ಎಂ.ಜಿ.ಎಲ್.ಸಿ. ಶಾಲೆಯಲ್ಲಿ ಮಂಗಳವಾರ ಜರಗಿತು.
ಬದಿಯಡ್ಕ ಪೆÇಲೀಸ್ ಠಾಣೆಯ ಎಸ್.ಐ. ಶಾಜು, ಸಿವಿಲ್ ಪೆÇಲೀಸರಾದ ಅನೂಪ್, ಮಹೇಶ್, ಬುಡಕಟ್ಟು ವಿಸ್ತರಣಾಧಿಕಾರಿ ಮುಹಮ್ಮದ್ ಶಾಹಿದ್, ಪ್ರಮೋಟರ್ ಪುಷ್ಪವೇಣಿ, ಕರ್ನಾಟಕ ಜಾನಪದ ಪರಿಷತ್ತು ಗೌರವ ಸಲಹೆಗಾರ ಪೆÇ್ರ.ಎ.ಶ್ರೀನಾಥ್, ಎನ್.ಎಸ್.ಎಸ್. ಯೋಜನಾಧಿಕಾರಿ ಇ.ಶ್ರೀನಾಥ್, ಎಂ.ಜಿ.ಎಲ್.ಸಿ. ಶಾಲೆಯ ಅಧ್ಯಾಪಕ ಬಾಲಕೃಷ್ಣ ಅಚ್ಚಾಯಿ, ರಾಮ ಬದಿಯಡ್ಕ, ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿಯ ಕಾರ್ಯದರ್ಶಿ ವಿದ್ಯಾಗಣೇಶ್ ಅಣಂಗೂರು, ಅಖಿಲೇಶ್ ನಗುಮುಗಂ ಮೊದಲಾದವರು ಉಪಸ್ಥಿತರಿದ್ದರು. ನವೆಂಬರ್ ಮೊದಲ ವಾರದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು, ಸರ್ಕಾರದ ವಿವಿಧ ಇಲಾಖೆಗಳ ಅಧಿಕೃತರನ್ನು ಒಳಪಡಿಸಿ ಕಾಲನಿಯ ಸಮಗ್ರ ಅಭಿವೃದ್ಧಿಗೆ ಸಭೆ ನಡೆಸುವುದಾಗಿ ತೀರ್ಮಾನಿಸಲಾಯಿತು.


