ಮಂಜೇಶ್ವರ: ಉಪ ಚುನಾವಣೆ ನಡೆದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಇದೀಗ ಮತ ಎಣಿಕೆ ಮುಂದುವರಿಯುತ್ತಿದ್ದು, ಯುಡಿಎಫ್ ಅಭ್ಯರ್ಥಿ ಎಂ.ಸಿ.ಖಮರುದ್ದೀನ್ 10409 ಮತಗಳಿಂದ ಮುನ್ನಡೆಯಲಿದ್ದಾರೆ.
ಪೈವಳಿಕೆ ನಗರ ಸರ್ಕಾರಿ ಶಾಲೆಯಲ್ಲಿ ಬೆಳಿಗ್ಗೆ ಆರಂಭಗೊಂಡಿರುವ ಮತ ಎಣಿಕಾ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದೆ. ವೆಟ್ಟಿಯೂರ್ ಕಾವ್ ಎಡರಂಗದ ವಿ.ಕೆ ಪ್ರಶಾಂತ್ 14251 ಭಾರೀ ಬಹುಮತದಿಂದ ಜಯಗಳಿಸಿದ್ದಾರೆ. ಕೋನ್ನಿಯಲ್ಲಿ ಎಡರಂಗ ಮುಂದಿದೆ. ಎರ್ನಾಕುಳಂ ಗಳಲ್ಲಿ ಭಾರೀ ಬಹುಮತದಿಂದ ಯುಡಿಎಫ್ ಗೆಲುವು ಸಾಧಿಸಿದೆ.

