ಕಾಸರಗೋಡು: ರಾಜ್ಯ ಸರ್ಕಾರವು ತನ್ನ ಸೇವೆಗಳನ್ನು ಎಲ್ಲ ಜನತೆಗೂ ತಲಪಿಸುವ ಉದ್ದೇಶದಿಂದ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ದೌತ್ಯದೊಂದಿಗೆ "ರಾಜ್ಯ ಸರಕಾರದ ಆರ್ಥಿಕ ಸಹಾಯಗಳು" ಎಂಬ ಸಮಗ್ರ ಮಾಹಿತಿಗಳ ಪುಸ್ತಕವನ್ನು ಕನ್ನಡದಲ್ಲೂ ಪ್ರಕಟಿಸಿದೆ. ಈ ಪುಸ್ತಕದ ಬಿಡುಗಡೆ ಇಂದು(ಜ.28) ಬೆಳಗ್ಗೆ 9.30ಕ್ಕೆ ಕುಂಬಳೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಡುಗಡೆಗೊಳಿಸುವರು. ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರಕಾರವೊಂದು ಭಾಷಾ ಅಲ್ಪಸಂಖ್ಯಾತರಿಗಾಗಿ ಆರ್ಥಿಕ ಸಹಾಯಗಳ ಪುಸ್ತಕವೊಂದನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದು, ಜಿಲ್ಲಾ ವಾರ್ತಾ ಇಲಾಖೆಯ ನೇತೃತ್ವದಲ್ಲಿ ಇದು ಸಿದ್ಧವಾಗಿದೆ.
ಸರ್ಕಾರದ ಎಲ್ಲ ಯೋಜನೆಗಳು ಈ ಮೂಲಕ ಒಮದೇ ಪುಸ್ತಕದಲ್ಲಿ ಜನತೆಗೆ ಸಿಗಲಿದೆ ಎಂಬುದೂ ಇಲ್ಲಿ ಗಮನಾರ್ಹ ವಿಚಾರ. ಸ್ಥಳೀಯಾಡಳಿತೆ ಸಂಸ್ಥೆಗಳ ಮೂಲಕ ವಿವಿಧ ಇಲಾಕೆಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಸಮಗ್ರ ಮಾಹಿತಿ, ಪ್ರತಿ ಯೋಜನೆಗಳ ಸಹಾಯ ಪಡೆಯುವ ಬಗೆ, ಅರ್ಜಿಯ ಸ್ವರೂಪ, ಕಳುಹಿಸಬೇಕಾದ ವಿಳಾಸ ಇತ್ಯಾದಿಗಳ ಮಾಹಿತಿ ಈ ಪುಸ್ತಕದಲ್ಲಿದೆ. ಗಂಭೀರ ಸ್ವರಪದ ರೋಗಿಗಳು, ವಯೋವೃದ್ಧರು, ಪರಿಶಿಷ್ಟ ಜಾತಿ-ಪಂಗಡದ ಮಂದಿ, ಇತರ ಹಿಂದುಳಿದ ಜನಾಂಗದವರು, ಮಕ್ಕಳು, ಬೇರೆ ರಾಜ್ಯಗಳ ಕಾರ್ಮಿಕರು, ಆನಿವಾಸಿಗಳು, ನಿವೃತ್ತ ಸೈನಿಕರು ಸಹಿತ ಎಲ್ಲ ಜನತೆಗೆ ಬೇಕಾದ ಸೌಲಭ್ಯಗಳ ವಿವರಗಳು ಈ ಹೊತ್ತಗೆಯಲಲಿದೆ. ವಿಶೇಷ ಪರಿಶೀಲನೆ ಅಗತ್ಯವರುವ ಜನತೆಗೆ ಸರಕಾರ ನೀಡುವ ಎಲ್ಲ ಸೌಲಭ್ಯಗಳಿಗೆ ಆದ್ಯತೆ ನೀಡಿ ರಾಜ್ಯ ಸರಕಾರ ರಚಿಸಿರುವ ಯೋಜನೆಗಳ ಸಮಗ್ರ ಮಾಹಿತಿಗಳು ಇಲ್ಲಿದ್ದು, ಸಾರ್ವಜನಿಕರ ಕೈಗೆಟಕಲಿವೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂದೇಶ, ರಾಜ್ಯ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಯು.ವಿ.ಜೋಸ್ ಅವರ ಪ್ರಸ್ತಾವನೆ ಇರುವ ಈ ಪುಸ್ತಕ ಗಡಿನಾಡಿನ ಜನತೆಗೆ ತುಂಬ ಸಹಕಾರಿಯಾಗಿದೆ. ಯೋಜನೆಗಳ ಹೆಸರು ಆಯಾ ಇಲಾಖೆಗಳ ವ್ಯಾಪ್ತಿಯಲ್ಲಿರುವುವು. ಜಿಲ್ಲೆಯ ಜನಪ್ರತಿನಿಧಿಗಳು, ಸ್ಥಳೀಯಾಡಳಿತೆ ಸಂಸ್ಥೆಗಳು, ವಾರ್ಡ್ ಪ್ರತಿನಿಧಿಗಳು, ಕುಟುಂಬಶ್ರೀ ಕಾರ್ಯಕರ್ತರು ಮೊದಲಾದವರ ಮೂಲಕ ಸಾರ್ವಜನಿಕರಿಗೆ ರಾಜ್ಯ ಸರಕಾರದ ಆರ್ಥಿಕ ಸಹಾಯ ಯೋಜನೆಗಳು ಎಂಬ ಪುಸ್ತಕ ವಾಚನಕ್ಕೆ ಅವಕಾಶಗಳಿವೆ.


