ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ.ಕುಟುಂಬಶ್ರೀ ನವ ಕೇರಳಕ್ಕಾಗಿ ಜನಕೀಯ ಯೋಜನೆ 2019-20ರ ಸಂಪನ್ಮೂಲ ಯೋಜನೆ ಭಾಗವಾಗಿ ಕುಟುಂಬಶ್ರೀ ಸದಸ್ಯರಿಗೆ ನಡೆದ ಸೂಕ್ಷ್ಮ ಉದ್ಯಮ (ಮೈಕ್ರೋ ಎಂಟರ್ಪ್ರೈಸಸ್) ತರಬೇತಿಯ ಸಮಾರೋಪ ಸಮಾರಂಭ ಕುಟುಂಬಶ್ರೀ ಸಭಾಂಣದಲ್ಲಿ ಸೋಮವಾರ ನಡೆಯಿತು.
ಗ್ರಾ.ಪಂ.ಅಧ್ಯಕ್ಷೆ ಲತಾ ಯುವರಾಜ್ ಕಾರ್ಯಕ್ರಮ ಉದ್ಘಾಟಿಸಿದರು.ಸಿಡಿಎಸ್ ಅಧ್ಯಕ್ಷೆ ಮಾಲಿನಿ ಎನ್.ಅಧ್ಯಕ್ಷತೆ ವಹಿಸಿದರು. ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ.ರೈ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೆ., ಪಂಚಾಯಿತಿ ಸದಸ್ಯರಾದ ವಿಶಾಲಾಕ್ಷಿ ಬಿ.ಆರ್., ಜಯಕುಮಾರ್, ಸುಜಾತ ಎಂ.ರೈ, ಕುಟುಂಬಶ್ರೀ ಜಿಲ್ಲಾ ಮಿಶನ್ ಎಡಿಎಂಸಿ ಹರಿದಾಸ್, ಡಿಪಿಎಂ ಆರತಿ, ಡಿಟಿಸಿ ಸುಕುಮಾರನ್, ಪ್ರಮೀಳ ಮತ್ತು ವಿಮಲ ಅಜೀಶಾ ಶುಭ ಹಾರೈಸಿದರು. ಫೇಬ್ರಿಕ್ ಪೈಂಟಿಂಗ್, ಸಾರಿ ಡಿಸೈನ್, ಎಂಬ್ರಾಯಿಡರಿ (ಫ್ಯಾಷನ್ ಡಿಸೈನ್) ತರಬೇತಿಗಳಲ್ಲಿ ಭಾಗವಹಿಸಿದ 28 ಸದಸ್ಯರಿಗೆ ಪಂಚಾಯಿತಿ ಅಧ್ಯಕ್ಷೆ ಪ್ರಮಾಣ ಪತ್ರ ವಿತರಿಸಿದರು.
ಗ್ರಾಮ ಪಂಚಾಯಿತಿ ವಿಸ್ತರಣಾಧಿಕಾರಿ, ಕುಟುಂಬಶ್ರೀ ಕಾರ್ಯದರ್ಶಿ ಅನೀಶ್ ಸ್ವಾಗತಿಸಿ, ಲೆಕ್ಕ ಪರಿಶೋಧಕಿ ನಿವೇದಿತ ಸಿ.ಎಚ್.ವಂದಿಸಿದರು.