HEALTH TIPS

ಕುಷ್ಠರೋಗ ನಿವಾರಣೆ ಪಕ್ಷಾಚರಣೆಜಿಲ್ಲೆಯಲ್ಲಿ ಆರಂಭ

                             
           ಕಾಸರಗೋಡು: ಕುಷ್ಠರೋಗ ನಿವಾರಣೆ ಪಕ್ಷಾಚರಣೆ ಜಿಲ್ಲೆಯಲ್ಲಿ ಆರಂಭಗೊಡಿದೆ. ಸಾರ್ವಜನಿಕರಲ್ಲಿ ಕುಷ್ಠರೋಗ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಸಮಾಜದಲ್ಲಿ ಅಳಿದುಳಿದಿರುವ ರೋಗಿಗಳನ್ನು ಪತ್ತೆಮಾಡಿ ಅವರನ್ನು ಸಂಪೂರ್ಣ ಚಿಕಿತ್ಸೆಗೊಳಪಡಿಸಿ, ಈ ರೋಗವನ್ನು ಬುಡಸಮೇತ ಕಿತ್ತೆಸೆಯುವ ಉದ್ದೇಶದಿಂದ ಈ ಪಕ್ಷಾಚರಣೆಗೆ ಚಾಲನೆ ಲಭಿಸಿದೆ. ಫೆ.12 ವರೆಗೆ ಜಿಲ್ಲೆಯಲ್ಲಿ ಈ ಸಂಬಂಧ ವಿವಿಧ ಚಟುವಟಿಕೆಗಳು ನಡೆಯಲಿವೆ. ಪಕ್ಷಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆ ಗುರುವಾರ ಅಂಬಲತ್ತರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಪುಲ್ಲೂರು-ಪೆರಿಯಗ್ರಾಮಪಂಚಾಯತ್ ಅಧ್ಯಕ್ಷೆ ಶಾರದಾ ಎಸ್.ನಾಯರ್ ನೆರವೇರಿಸಿದರು.
         ಜಿಲ್ಲೆಯಲ್ಲಿ 35 ರೋಗಿಗಳು :
  ಜಿಲ್ಲೆಯಲ್ಲಿ 35 ಮಂದಿ ಕುಷ್ಠರೋಗದ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಮೂವರು ಮಕ್ಕಳು ಮತ್ತು ಇತರ ರಾಜ್ಯಗಳ ಕಾರ್ಮಿಕರೂ ಸೇರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವರದಿ ತಿಳಿಸುತ್ತದೆ. ರೋಗದಿಂದ ಅಂಗವಿಕಲತೆ ಹೊಂದಿರುವ ಮೂವರನ್ನೂ ಈ ವರ್ಷ ಜಿಲ್ಲೆಯಲ್ಲಿ ಪತ್ತೆಮಾಡಲಾಗಿದೆ ಎಂದು ವರದಿ ಸೂಚಿಸುತ್ತದೆ. ಈ ಬಾರಿಯ ಪಕ್ಷಾಚರಣೆ ಜಿಲ್ಲೆಯನ್ನು ಸಂಪೂರ್ಣ ಕುಷ್ಠರೋಗ ಮುಕ್ತಗೊಳಿಸುವ ಉದ್ದೇಶಹೊಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries