ಮಂಜೇಶ್ವರ: ಇತಿಹಾಸ ಪ್ರಸಿದ್ದ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆಬ್ರವರಿ 11 ರಿಂದ ವಿವಿಧ ವೈದಿಕ, ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ವರ್ಕಾಡಿ ದಿನೇಶ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಜರಗಲಿದೆ.
ಜಾತ್ರೆಯ ಪೂರ್ವ ಭಾವಿಯಾಗಿ ಫೆಬ್ರವರಿ 10ರಂದು ರಾತ್ರಿ 7ರಿಂದ ದುರ್ಗಾನಮಸ್ಕಾರ ಪೂಜೆ ಜರಗಲಿದೆ. ಫೆಬ್ರವರಿ 11ರಂದು ಬೆಳಿಗ್ಗೆ 7ರಿಂದ ಉಷಃಕಾಲ ಪೂಜೆ, ಗಣಹೋಮ, ನವಕ ಕಲಶಾಭಿಷೇಕ, ಏಕಾದಶರುದ್ರಾಭಿಷೇಕ, ಮಧ್ಯಾಹ್ನ 12 ರಿಂದ ಮಹಾಪೂಜೆ, ಶ್ರೀದೇವರಬಲಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 8ಕ್ಕೆ ರಂಗಪೂಜೆ, 9ರಿಂದ ಭೂತಬಲಿ ಉತ್ಸವ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಜರಗಲಿದೆ.
ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 10ರಿಂದ ಭಜನಾ ಸತ್ಸಂಗ ನಡೆಯಲಿದೆ. ಸಂಜೆ 6 ರಿಂದ ಯೋಗೀಶ ರಾವ್ ಚಿಗುರುಪಾದೆ ರಚಿಸಿ ತುಳುನಾಡ ರತ್ನ ದಿನೇಶ್ ಅತ್ತಾವರ ನಿರ್ದೇಶಿಸಿ ಮಾಸ್ಟರ್ಸ್ ಮೀಯಪದವು ತಂಡ ಅಭಿನಯಿಸುವ ಉಳ್ಳಾಲ ರಾಣಿ ಅಬ್ಬಕ್ಕ ದೃಶ್ಯ ರೂಪಕ ಪ್ರಸ್ತುತಿ ಗೊಳ್ಳಲಿದ್ದು, ಶ್ರೀ ಮಹಾಲಿಂಗೇಶ್ವರ ಸೇವಾಸಮಿತಿ ಹಾಗೂ ಮಾಸ್ಟರ್ಸ್ ಮೀಯಪದವು ಸಹಕಾರ ನೀಡಲಿದ್ದಾರೆ. ರಾತ್ರಿ 11ರಿಂದ ಭ್ರಾಮರಿ ಕಲಾವಿದೆರ್ ಉಪ್ಪಳ ಅಭಿನಯಿಸುವ ತುಳು ನಾಟಕ ಬಚ್ಚಾಲಿ ಆಂಡಲಾ ಮೆಚ್ಚೋಲಿ ಪ್ರದರ್ಶನ ನಡೆಯಲಿದೆ. ಶ್ರೀ ಮಹಾಲಿಂಗೇಶ್ವರ ಮಹಿಳಾ ಸಮಿತಿ ಹಾಗೂ ಯುವಭಾರತಿ ಸೇವಾ ಸಂಗ ಕುಳೂರು ಸಹಕಾರ ನೀಡುವರು ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.




