HEALTH TIPS

ಗಾಂಧೀಜಿಯ ಅಹಿಂಸಾ ನಡೆ ಮಾದರಿ-ಉಪನ್ಯಾಸಕಿ ವಿನೀಷಾ



          ಪೆರ್ಲ: ಹಿಂಸೆಯಿಂದ ಸಾಧಿಸಲು ಅಸಾಧ್ಯವಾದುದನ್ನು ಅಹಿಂಸೆಯಿಂದ ಸಾಧಿಸಬಹುದು ಎಂದು ಸ್ವಾತಂತ್ರ್ಯ ಹೋರಾಟದ ಮುಖಾಂತರ  ಜಗತ್ತಿಗೆ ಸಾರುವಲ್ಲಿ ಗಾಂಧೀಜಿ ಯಶಸ್ವಿಯಾಗಿದ್ದರು. ಗಾಂಧೀಜಿಯ ಅಹಿಂಸಾ ನಡೆ ಪ್ರತಿ ರಾಷ್ಟ್ರಕ್ಕೂ, ಪ್ರತಿ ವ್ಯಕ್ತಿಗೂ ಮಾದರಿ ಎಂದರು. ಎಂದು ಮಲಯಾಳಂ ವಿಭಾಗದ ಉಪನ್ಯಾಸಕಿ ವಿನೀಷಾ ಹೇಳಿದರು. 
           ಪೆರ್ಲ ನಾಲಂದ ಕಾಲೇಜು ಎನ್ನೆಸ್ಸೆಸ್ ಘಟಕದ ನೇತೃತ್ವದಲ್ಲಿ ಗುರುವಾರ ನಡೆದ ಹುತಾತ್ಮರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
           ಸಿನೆಮಾ ನಟರನ್ನು ಮಾದರಿಯಾಗಿ ತೆಗೆದುಕೊಳ್ಳುವ ಬದಲು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮರು ನಮಗೆ ಮಾದರಿಯಾಗಲಿ. ಗಾಂಧೀಜಿಯಂತಹ ಮಹಾನ್ ದೇಶಭಕ್ತರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿದರೆ ಹುತಾತ್ಮರ ತ್ಯಾಗ ಬಲಿದಾನ ಸಾರ್ಥಕವಾಗುತ್ತದೆ ಎಂದರು.
        ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ. ಮಾತನಾಡಿ, ದೇಶವನ್ನು ಪರರಾಷ್ಟ್ರಗಳ ಕಪಿ ಮುಷ್ಠಿಯಿಂದ ರಾಷ್ಟ್ರವನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ತಮ್ಮ ಸರ್ವಸ್ವವನ್ನೇ ರಾಷ್ಟ್ರಕ್ಕಾಗಿ ಅರ್ಪಣೆ ಮಾಡಿದ ವೀರ ದೇಶಭಕ್ತರ ತ್ಯಾಗ ಬಲಿದಾನ ಎಂದೆಂದಿಗೂ ಸ್ಮರಣೀಯ ಎಂದರು. ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ಕಾವ್ಯ, ಅಂಜನಾ, ಜಗತ್, ಅಭಿಲಾಶ್, ಅಜಿತ್ ಉಪಸ್ಥಿತರಿದ್ದರು. ಶ್ರಾವ್ಯ ನಿರೂಪಿಸಿದರು. ಭವ್ಯ ಸ್ವಾಗತಿಸಿದರು. ದಿವ್ಯ ವಂದಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries