ಉಪ್ಪಳ: ಮಹಾತ್ಮ ಗಾಂಧಿಯವರ 150ನೇ ಜನ್ಮ ವರ್ಷಾಚರಣೆಯ ಅಂಗವಾಗಿ ಚಿಪ್ಪಾರು ಜನಶಕ್ತಿ ಫ್ರೆಂಡ್ಸ್ ಕ್ಲಬ್ ಗ್ರಂಥಾಲಯದಲ್ಲಿ"ಗಾಂಧಿ ಸ್ಮೃತಿ' ಕಾರ್ಯಕ್ರಮ ಶುಕ್ರವಾರ ಜರಗಿತು.
ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಕಾರ್ಯದರ್ಶಿ ಅಹಮ್ಮದ್ ಹುಸೈನ್ ಕಾರ್ಯಕ್ರಮ ಉದ್ಘಾಟಿಸಿದರು.ಕೃಷ್ಣ ಶೆಟ್ಟಿಗಾರ್ ಚಿಪ್ಪಾರು ಅಧ್ಯಕ್ಷತೆ ವಹಿಸಿದರು.ಅಬ್ದುಲ್ ರಝಾಕ್ ಚಿಪ್ಪಾರು ಮತ್ತು ದಾಸಪ್ಪ ಶೆಟ್ಟಿ ಉಪನ್ಯಾಸ ನೀಡಿದರು. ಗ್ರಂಥಾಲಯದ ಹಿರಿಯ ಕಾರ್ಯಕರ್ತ ಐತ್ತಪ್ಪ ಶೆಟ್ಟಿಗಾರ್ ಚಿಪ್ಪಾರು, ಶಂಕರ ಮಾಸ್ತರ್ ಅಮ್ಮೇರಿ, ಹಸನ್ ಕುಟ್ಟಿ ಸೋಣಾಜೆ ಇವರನ್ನು ಖಾದಿ ವಸ್ತ್ರ ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಗ್ರಂಥಾಲಯ ಕಾರ್ಯದರ್ಶಿ ಖಲೀಲ್ ನಾರ್ಣಕಟ್ಟೆ ಸ್ವಾಗತಿಸಿ, ಗ್ರಂಥಪಾಲಕಿ ಜಯಲಕ್ಷ್ಮಿ ವಂದಿಸಿದರು.