ಕಾಸರಗೊಡು: ಕೋವಿಡ್-19 ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರೋಗಬಾಧಿತರ ಚಿಕಿತ್ಸೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ತುರ್ತಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಅಗತ್ಯ ಕಾಮಗಾರಿ ಆರಂಭಿಸಿದೆ.
ಕಟ್ಟಡ ಕಾಮಗಾರಿ ಅಂತಿಮ ಹಂತದಲ್ಲಿರುವ ಮಧ್ಯೆ ಕಟ್ಟಡಕ್ಕೆ ಶನಿವಾರ ತುರ್ತಾಗಿ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.ರಾಜ್ಯ ಇಲೆಕ್ಟ್ರಿಸಿಟಿ ಬೋರ್ಡ್ ಅಧ್ಯಕ್ಷೆನ್. ಎಸ್ ಪಿಳ್ಳೆ ಅವರ ನಿರ್ದೇಶಾನುಸಾರ 160ಕೆ.ವಿ ಟ್ರಾನ್ಸ್ಫಾರ್ಮರ್ ಅಳವಡಿಸುವ ಕಾರ್ಯ ಪೂರ್ತಿಗೊಳಿಸಲಾಗಿದೆ.ಉತ್ತರ ವಲಯ ಮುಖ್ಯ ಅಭಿಯಂತ ಆರ್. ರಾಧಾಕೃಷ್ಣನ್, ಕಾಸರಗೋಡು ಜಿಲ್ಲಾ ಉಪ ಮಹಾ ಅಭಿಯಂತ ಸುರೇಂದ್ರನ್, ಇಲೆಕ್ಟ್ರಿಕಲ್ ವಿಭಾಗೀಯ ಮಹಾ ಅಭಿಯಂತ ಪಿ.ಜಯಕೃಷ್ಣನ್, ಪೆರ್ಲ ಸೆಕ್ಷನ್ ಸಹಾಯಕ ಇಂಜಿನಿಯರ್ ಅಶೋಕನ್ ನೇತೃತ್ವದಲ್ಲಿ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ.
ಈ ಮಧ್ಯೆ ಜಿಲ್ಲಾಡಳಿತೆ ನಡೆಸುತ್ತಿರುವ ಕೋವಿಡ್-19 ಪ್ರತಿರೋಧ ಚಟುವಟಿಕೆಗಳಿಗೆ ಸಿ.ಪಿ.ಸಿ.ಆರ್.ಐ ಹೆಗಲು ನೀಡಿ ರಂಗಕ್ಕಿಳಿದಿದೆ.ಇದರ ಮೊದಲ ಹಂತವಾಗಿ ರೋಗಪತ್ತೆ ಪ್ರಯೋಗಾಲಯದ ಸಾಮಾಗ್ರಿಗಳನ್ನು ಪೆರಿಯ ಕೇಂದೀಯ ವಿಶ್ವ ವಇದ್ಯಾಳಯದ ಕೋವಿಡ್-19 ತಪಾಸಣೆ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ.ಅನಿತಾ ಕರುಣ್ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರೊಂದಿಗೆ ನಡೆಸಿದ ಮಾತುಕತೆಯ ನ್ನೆಲೆಯಲ್ಲಿ ಸಿ.ಪಿ.ಸಿ.ಆರ್.ಐ.ಯ ಬಯೋಟೆಕ್ನಾಲಜಿ ಪ್ರಯೋಗಾಲಯದಿಂದ ಎರಡು ರಿಯಲ್ ಟೈಂ ಪಿ.ಸಿ.ಆರ್. ಮೆಷಿನ್ ಗಳನ್ನು ನೀಡಲಾಗಿದೆ. ತಪಾಸಣೆ ಪ್ರಯೋಗಾಲಯ ಪೂರ್ಣರೂಪದಲ್ಲಿ ಸಜ್ಜುಗೊಳ್ಳುವ ವೇಳೆ ಸಿ.ಪಿ.ಸಿ.ಆರ್.ಐ.ಯ ಮೂವರು ತಾಂತ್ರಿಕ ತಜ್ಞರ ಸೇವೆಯೂ ಈ ಪ್ರಯೋಗಾಲಯದಲ್ಲಿ ಲಭ್ಯವಿರುವುದು.
ವೆರ್ಜಿನ್ ತೆಂಗಿನೆಣ್ಣೆ ಬಳಸಿ ಹ್ಯಾಂಡ್ ಸಾನಿಟೈಸರ್ ಸಿದ್ಧಪಡಿಸುವ ಯೋಜನೆ ಸಿ.ಪಿ.ಸಿ.ಆರ್.ಐ.ಯಲ್ಲಿ ಸಿದ್ಧವಾಗಿದೆ. ಇದಕ್ಕೆ ಬೇಕಾದ ಸ್ಪಿರಿಟ್ ಶೀಘ್ರದಲ್ಲೇ ಒದಗಿಸುವ ಕ್ರಮಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು ತಿಳಿಸಿದ್ದಾರೆ. ಇದು ಲಭಿಸುತ್ತಿದ್ದಂತೆ ಸಾನಿಟೈಸರ್ ಉತ್ಪಾದನೆ ಆರಂಭಗೊಳ್ಳಲಿದೆ. ಸಿ.ಪಿ.ಸಿ.ಆರ್.ಐ.ಯ ಚಂದ್ರಗಿರಿ ಅತಿಥಿಗೃಹ ಜಿಲ್ಲೆಯ ಸುರಕ್ಷಾ ವ್ಯವಸ್ಥೆಗಳಿಗೆ ನೇತೃತ್ವ ವಹಿಸುವ ಪೆÇಲೀಸ್ಇಲಾಖೆಯ ಹಿರಿಯ ಅಧಿಕಾರಿಗಳ ವಸತಿಗೆ ನೀಡಲಾಗಿದೆ. ಇದಲ್ಲದೆ ಅಗತ್ಯಬಿದ್ದರೆ ಐಸೊಲೇಷನ್ ವ್ಯವಸ್ಥೆ ಏರ್ಪಡಿಸುವಿಕೆಗೆ ಅತಿಥಿಗೃಹಗಳನ್ನು ಜಿಲ್ಲಾಡಳಿತೆಗೆ ನೀಡಲು ಸಿದ್ಧರಿರುವುದಾಗಿ ಸಿ.ಪಿ.ಸಿ.ಆರ್.ಐ. ನಿರ್ದೇಶಕಿ ಡಾ.ಅನಿತಾ ಕರುಣ್ ತಿಳಿಸಿದರು.