ಕುಂಬಳೆ: ಕರೊನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ಬಂದ್ ಮಾಡಿರುವುದರಿಂದ ಮಂಗಳೂರಿಗೆ ಚಿಕಿತ್ಸೆಗೆ ತೆರಳಲಾಗದೆ ಇತರ ರೋಗಿಗಳು ತೀವ್ರ ಸಮಸ್ಯೆ ಎದುರಿಸುವಂತಾಗಿದೆ.
ಡಯಾಲಿಸಿಸ್ ರೋಗಿಗಳು ತಲಪಾಡಿಯ ವರೆಗೆ ತೆರಳಿ ವಾಪಸಾಗಬೇಕಾಯಿತು. ಕರೊನಾ ಹೆಸರಿನಲ್ಲಿ ಏರ್ಪಡಿಸಿದ ನಿಯಂತ್ರಣದಿಂದಾಗಿ ಇತರ ರೋಗಿಗಳು ಗಂಭೀರ ಪರಿಸ್ಥಿತಿಯನ್ನು ಎದುರಿಸುವಂತಾಗಿದೆ. ಬದಲಿ ವ್ಯವಸ್ಥೆಗಳಿಲ್ಲದಿರುವುದರಿಂದ ಕಾಸರಗೋಡಿನ ರೋಗಿಗಳು ಸಂಕಷ್ಟಪಡುವಂತಾಗಿದೆ.
ಮುಳ್ಳೇರಿಯಾ ನಿವಾಸಿ ಗೋಪಾಲಕೃಷ್ಣನ್ ಅವರು ಡಯಾಲಿಸಿಸ್ಗಾಗಿ ತನ್ನ ಪತ್ನಿ ಶೈಲಜಾ ಅವರನ್ನು ಗುರುವಾರ ತಲಪಾಡಿಗೆ ತಲುಪಿಸಿದರೂ ಅಲ್ಲಿನ ಪೆÇಲೀಸರು ಇವರನ್ನು ವಾಪಸು ಕಳುಹಿಸಿದರು. ರಾಜಪುರದ 15 ವರ್ಷ ಪ್ರಾಯದ ಬಾಲಕನನ್ನೂ ಇದೇ ರೀತಿ ವಾಪಸು ಮಾಡಲಾಗಿತ್ತು. ಈ ಬಾಲಕನಿಗೆ ಕಾಂಞಂಗಾಡ್ನ ಜಿಲ್ಲಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ಚಿಕಿತ್ಸೆ ಲಭಿಸಿದ ಹಿನ್ನೆಲೆಯಲ್ಲಿ ರಕ್ಷಿಸಲಾಯಿತು.
ಇತರ ವಾಹನಗಳು ಲಭಿಸದ ಹಿನ್ನೆಲೆಯಲ್ಲಿ ಗೋಪಾಲಕೃಷ್ಣನ್ ಬೈಕ್ನಲ್ಲಿ ತನ್ನ ಪತ್ನಿಯನ್ನು ಕೊಂಡೊಯ್ದಿದ್ದರು. ಕದ್ರಿಯ ವಿಜಯ ಕ್ಲಿನಿಕ್ನಲ್ಲಿ ಚಿಕಿತ್ಸೆಗೆ ಕಳೆದ ಸೋಮವಾರ ಹೋದಾಗ ನಿಯಂತ್ರಣ ಸಾಧ್ಯತೆಯ ಹಿನ್ನೆಲೆಯಲ್ಲಿ ಅಲ್ಲಿನ ಡಾಕ್ಟರ್ರಿಂದ ಪತ್ರ ಪಡೆದುಗೊಂಡಿದ್ದರು. ಡಾಕ್ಟರ್ ಅವರಿಂದ ಪಡೆದ ಪತ್ರವನ್ನು ಗಡಿಯಲ್ಲಿ ತೋರಿಸಿದರೂ ಪೆÇಲೀಸರು ತಲಪಾಡಿಯ ಆಚೆಗೆ ಹೋಗಲು ಅನುಮತಿ ನೀಡಿಲ್ಲ.
ಬೆಳಗ್ಗೆ 4.30 ಕ್ಕೆ ನಿದ್ದೆಯಿಂದ ಎದ್ದು 5.30 ಕ್ಕೆ ಮನೆಯಿಂದ ಮಂಗಳೂರು ಆಸ್ಪತ್ರೆಗೆ ಹೊರಟಿದ್ದರು. 45 ಕಿ.ಮೀ. ದೂರವನ್ನು ಬೈಕ್ನಲ್ಲಿ ಸಂಚರಿಸಿ ತಲಪಾಡಿಗೆ ತಲುಪಿದ್ದರು. ತಲಪಾಡಿಯಿಂದ ಡಾಕ್ಟರಿಗೆ ಕರೆ ಮಾಡಲಾಯಿತು. ಆಸ್ಪತ್ರೆಗೆ ತಲುಪಿದರೆ ಚಿಕಿತ್ಸೆ ನೀಡಬಹುದೆಂದು ಹೇಳಿದರೆಂದು ಗೋಪಾಲಕೃಷ್ಣನ್ ಹೇಳಿದ್ದಾರೆ. ಡಾಕ್ಟರ್ ಪೆÇಲೀಸರಿಗೆ ಕರೆ ಮಾಡಿದರೂ ಪೆÇಲೀಸರು ಫೆÇೀನ್ ಕರೆಯನ್ನು ಸ್ವೀಕರಿಸಲಿಲ್ಲ. ಕಾಸರಗೋಡು ಜಿಲ್ಲಾಧಿಕಾರಿ ಕರೆದರೂ ಕರೆ ಸ್ವೀಕರಿಸಲಿಲ್ಲವೆಂದು ಗೋಪಾಲಕೃಷ್ಣನ್ ಹೇಳಿದ್ದಾರೆ. ಮಧ್ಯಾಹ್ನ ಅದೇ ಬೈಕ್ನಲ್ಲಿ ಮನೆಗೆ ವಾಪಸಾದರು. ಈ ಸಂದರ್ಭದಲ್ಲಿ ರೋಗಿಗೆ ಆರೋಗ್ಯ ಸಮಸ್ಯೆ ಹೆಚ್ಚಾಯಿತು. ಇವರಿಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ಗೆ ವ್ಯವಸ್ಥೆ ಮಾಡಲಾಗುತ್ತಿದೆ.
ವರ್ಕಾಡಿ ಧರ್ಮನಗರದ ಸುಹರಾ, ಉಸ್ಮಾನ್, ಆನೆಕಲ್ಲಿನ ಇಸ್ಮಾಯಿಲ್ ಮೊದಲಾದವರಿಗೆ ಕರ್ನಾಟಕದ ಆಸ್ಪತ್ರೆಗೆ ಹೋಗಲು ಸಾಧ್ಯವಾಗಲಿಲ್ಲ.