ಮುಳ್ಳೇರಿಯ: ಮಲೆನಾಡ ವಲಯವಾಗಿರುವ ಕಾರಡ್ಕ ಬ್ಲಾಕ್ ಪಂಚಾಯತಿ ವ್ಯಾಪ್ತಿಯ 5 ಗ್ರಾಮಪಂಚಾಯತಿಗಳಲ್ಲಿ ಸಮುದಾಯ ಅಡುಗೆ ಮನೆಗಳು ಸಕ್ರಿಯವಾಗಿವೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಇತರ ರಾಜ್ಯಗಳ ಕಾರ್ಮಿಕರು ತುಂಬ ಕಡಿಮೆಯಿರುವ ಈ ಪ್ರದೇಶಗಳಲ್ಲಿ ಲಾಕ್ ಡೌನ್ ಆದೇಶದ ವೇಳೆ ಹೊತ್ತಿನ ಆಹಾರಕ್ಕೆ ತತ್ವಾರ ಅನುಭವಿಸುತ್ತಿರುವ ಮಂದಿಗಾಗಿ ಈ ಸಮುದಾಯ ಅಡುಗೆಮನೆ ಚಟುವಟಿಕೆ ನಡೆಸುತ್ತಿದೆ.
ಕಾರಡ್ಕ, ಮುಳಿಯಾರು, ಕುತ್ತಿಕೋಲ್, ಬೇಡಡ್ಕ, ಬೆಳ್ಳೂರು ಗ್ರಾಮಪಂಚಾಯತಿಗಳಲ್ಲಿ ಈ ಸಮುದಾಯ ಅಡುಗೆನೆಗಳು ಸಕ್ರಿಯವಾಗಿವೆ. ಬೆಳ್ಳೂರು ಗ್ರಾಮಪಂಚಾಯತಿ ನಲ್ಲಿ 19 ಮಂದಿಗೆ ಮೊದಲ ದಿನವೇ ಭೋಜನ ವಿತರಣೆ ನಡೆಸಲಾಗಿದೆ. ಕುತ್ತಿಕೋಲ್ ಗ್ರಾಮಪಂಚಾಯತಿ ಕಾರ್ಯಾಲಯದ ಬಳಿಯ ಕಟ್ಟಡದ ಕುಟುಂಬಶ್ರೀ ಕ್ಯಾಂಟೀನ್ ನಲ್ಲಿ ಸಿದ್ಧಪಡಿಸಿದ ಭೋಜನವನ್ನು 480 ಮಂದಿಗೆ ವಿತರಿಸಲಾಗಿದೆ. ಮುಳಿಯಾರು ಗ್ರಾಮಪಂಚಾಯತಿ ಸಮುದಾಯ ಅಡುಗೆಮನೆಯಲ್ಲಿ 300 ಮಂದಿಗೆ ಭೋಜನ ನೀಡಲಾಗಿದೆ. ಬೇಡಡ್ಕ ಗ್ರಾಮಪಂಚಾಯತಿಯಲ್ಲಿ ಕುಂಡಂಕುಳಿ ಕುಟುಂಬಶ್ರೀ ಕ್ಯಾಂಟೀನ್ ಮೂಲಕ ಪಾಕ ಮಾಡಿದ ಭೋಜನವನ್ನು 168 ಮಂದಿಗೆ ವಿತರಿಸಲಾಗಿದೆ. ಮುಳ್ಳೇರಿಯ ಪೇಟೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಕಾರಡ್ಕ ಗ್ರಾಮಪಂಚಾಯತಿ ಸಮುದಾಯ ಅಡುಗೆ ಮನೆಯಿಂದ 20 ಮಂದಿಗೆ ಭೋಜನ ನೀಡಲಾಗಿದೆ.
ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೆಲವು ಅತಿಥಿ ಕಾರ್ಮಿಕರಿಗೆ ಭೋಜನದ ಜೊತೆಗೆ ಅನಿವಾರ್ಯ ಸಾಮಾಗ್ರಿಗಳ ಕಿಟ್ ಗಳನ್ನೂ ವಿತರಿಸಲಾಗುತ್ತಿದೆ. ಸ್ವಯಂ ಸೇವಾ ಕಾರ್ಯಕರ್ತರು, ಜನ ಜಾಗೃತಿ ಸಮಿತಿ ಕಾರ್ಯಕರ್ತರು ಕುಟುಂಬಶ್ರೀ ಸಮುದಾಯ ಅಡುಗೆ ಮನೆಗಳ ಮೂಲಕ ಉತ್ತಮ ಭೋಜನ ವಿತರಣೆ ನಡೆಸಲಾಗುತ್ತಿದೆ.
ಅಭಿಮತ:
ಯಾರೂ ಉಪವಾಸದಲ್ಲಿರಬಾರದು:
ಮಹಾಮಾರಿ ಕರೊನಾದಿಂದ ದಿಕ್ಕೆಟ್ಟ ವ್ಯವಸ್ಥೆಗಳ ಕಾರಣ ಬ್ಲಾಕ್ ಪಂಚಾಯತಿ ವ್ಯಾಪ್ತಿಯಲ್ಲಿ ಯಾರೂ ಉಪವಾಸದಲ್ಲಿರಬಾರದು ಎಂಬ ಕಾರಣಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
* ಓಮನಾ ರಾಮಚಂದ್ರನ್, ಅಧ್ಯಕ್ಷೆ, ಕಾರಡ್ಕ ಬ್ಲಾಕ್ ಪಂಚಾಯತಿ.