HEALTH TIPS

ಅನ್ಯ ರಾಜ್ಯಗಳ ಕಾರ್ಮಿಕರ ಸಹಕಾರಕ್ಕೆ ರಂಗಕ್ಕಿಳಿದ ನೌಕರಿ ಇಲಾಖೆ

     
       ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರ ಸಹಾಯಕ್ಕೆ ನೌಕರಿ ಇಲಾಖೆ ರಂಗದಲ್ಲಿದೆ. ಕಾಸರಗೋಡು ಜಿಲ್ಲಾ ಲೇಬರ್ ಕಚೇರಿಗೆ ಇತರ ರಾಜ್ಯಗಳ ಕಾರ್ಮಿಕರು ದೂರು ಸಲ್ಲಿಸಬುದು. ಇದಕ್ಕಾಗಿ 24 ತಾಸೂ ಚಟುವಟಿಕೆ ನಡೆಸುವ ದೂರವಾಣಿ ನಂಬ್ರ: 04994256950 ವನನು ಸಂಪರ್ಕಿಸಬಹುದು. ಭೋಜನ ಅಗತ್ಯವಿದ್ದಲ್ಲಿ ವಾರ್ಡ್ ಮಟ್ಟದ ಜನಜಾಗೃತಿ ಸಮಿತಿ ಅಧ್ಯಕ್ಷರನ್ನು ಸಂಪರ್ಕಿಸಬಹುದು. ಸಮುದಾಯ ಅಡುಗೆಮನೆ ಮೂಲಕ ಅವರಿಗೆ ಭೋಜನ ವಿತರಿಸಲಾಗುವುದು. ಕಾರ್ಮಿಕರಿಗೆ ವಸತಿ, ಭೋಜನ, ವೇತನ ಸಂಬಂಧ ಗುತ್ತಿಗೆದಾರರು ಗಮನಹರಿಸಬೇಕು.
      ಜಿಲ್ಲೆಯಲ್ಲಿ ಈಗ 11249 ಮಂದಿ ಇತರ ರಾಜ್ಯಗಳ ಕಾರ್ಮಿಕರು ಇದ್ದಾರೆ. ಇದರಲ್ಲಿ ಭೋಜನಕ್ಕೆ ತತ್ವಾರವಿರುವವರಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಲೇಬರ್ ಅಧಿಕಾರಿ ತಿಳಿಸಿದರು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries