ಕಾಸರಗೋಡು: ಕರ್ನಾಟಕ-ಕೇರಳ ಗಡಿ ಪ್ರದೇಶ ತಲಪ್ಪಾಡಿಯಲಿ ಹೆದ್ದಾರಿ ಮುಚ್ಚುಗಡೆ ನಡೆಸಿರುವ ಹಿನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೋಗಿಗಳಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಜಾರಿಗೊಳಿಸುವ ಡಯಾಲಿಸಿಸ್ ಸೌಲಭ್ಯಕ್ಕೆ ಚಾಲನೆ ಲಭಿಸಿದೆ.
ಜಾರಿಯಲ್ಲಿ ತ್ರಿಕರಿಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಚೆರುವತ್ತೂರು ರೈಟ್ ಚಾರಿಟೇಬಬಲ್ ಟ್ರಸ್ಟ್ ಡಯಾಲಿಸಿಸ್ ಸೆಂಟರ್ ನಲ್ಲಿ ಈ ಸೌಲಭ್ಯಗಳಿವೆ. ಹೆಪಟೈಟಿಸ್ ಪಾಸಿಟಿವ್ ರೋಗಿಗಳಿಗೆ ಕಾಸರಗೋಡು ಕಿಂಸ್ ಆಸ್ಪತ್ರೆಯಲ್ಲಿ ಸೌಲಭ್ಯ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ತಿಳಿಸಿದರು.
ಮಂಗಳೂರಿನಿಂದ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಔಷಧ ಸಿಗದೇ ಇರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಸೌಲಭ್ಯ ಏರ್ಪಡಿಸಲಾಗಿದೆ ಎಂದವರು ನುಡಿದರು. ಮಂಗಳೂರಿನಿಂದ ಔಷಧ ಸಂಗ್ರಹಿಸಿ ಪ್ರತಿ ಮಂಗಳವಾರ, ಶನಿವಾರ ಜಿಲ್ಲೆಯ ಮೂರು ಡೆಲಿವರಿ ಪಾಯಿಂಟ್ ಗಳಿಗೆ ತಲಪಿಸಲಾಗುವುದು. ಜಿಲ್ಲಾ ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಅವರು ಈ ವಿಚಾರದ ಮೇಲ್ನೋಟ ವಹಿಸುತ್ತಿದ್ದಾರೆ. ಅಗತ್ಯ ಇರುವವರು ದೂರವಾಣಿ ಸಂಖ್ಯೆ 7022605026, 9447287098 ಎಂಬ ನಂಬ್ರ ಮೂಲಕ ವೈದ್ಯರ ಚೀಟಿ ಸಹಿತ ಅಗತ್ಯವಿರುವ ಔಷಧ ಬಗ್ಗೆ ತಿಳಿಸಬೇಕು. ಅಗತ್ಯವಿದ್ದರೆ ಹೆಚ್ಚುವರಿ ಔಷಧ ಸೌಲಭ್ಯ ಒದಗಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ತಿಳಿಸಿದರು.