ಕಾಸರಗೋಡು: ಕೋವಿಡ್ 19 ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಆರೋಗ್ಯ ವಲಯದಲ್ಲಿ ಸೇವೆ ನಡೆಸಲು ಸ್ವಯಂ ಸೇವಕರ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಕರೆ ನೀಡಿದ್ದಾರೆ.
ವೈದ್ಯರು, ಎಂ.ಬಿ.ಬಿ.ಎಸ್. ತೇರ್ಗಡೆ ಹೊಂದಿದ ಹೌಸ್ ಸರ್ಜನ್ ಗಳು, ಎಂ.ಬಿ.ಬಿ.ಎಸ್. ಅಂತಿಮ ವರ್ಷದಲ್ಲಿರುವವರು, ನರ್ಸಿಂಗ್ ತರಬೇತಿ ಪೂರ್ತಿಗೊಳಿಸಿ, ವೃತ್ತಿ ಅನುಭವ ಹೊಂದಿರುವವರು, ನರ್ಸಿಂಗ್ ತರಬೇತಿಯ ಕೊನೆಯ ವರ್ಷದ ವಿದ್ಯಾರ್ಥಿಗಳು, ಆರೋಗ್ಯ ಕಾರ್ಯಕರ್ತರು, ಸಾನಿಟರಿ ವರ್ಕರ್ ತರಬೇತಿ ಹೊಂದಿರುವವರು ಬೇಕಾಗಿದ್ದಾರೆ. ಇವರಿಗೆ ಯಾತ್ರಾ ಸೌಲಭ್ಯ, ಭೋಜನ, ವಸತಿ ಉಚಿತವಾಗಿ ಲಭಿಸಲಿದೆ. ಇತರ ಜಿಲ್ಲೆಗಳಲ್ಲಿ ನೌಕರಿ ನಡೆಸುತ್ತಿರುವವರೂ, ವಿವಿಧ ಕಾರಣಗಳಿಂದ ಜಿಲ್ಲೆಯಿಂದ ಹೊರಹೋಗಲಾರದೆ ಉಳಿದವರು ಈ ವೇಳೆ ಭಾಗವಹಿಸಬಹುದು. ಆಸಕ್ತರು ಜಿಲ್ಲಾ„ಕಾರಿಗಳ 9447496600 ಎಂಬ ವಾಟ್ಸ್ ಆಪ್ ನಂಬ್ರಕ್ಕೆ ಹೆಸರು, ವಿಳಾಸ, ಶಿಕ್ಷಣಾರ್ಹತೆ, ವೃತ್ತಿ ಪರಿಚಯ, ದೂರವಾಣಿ ನಂಬ್ರ ಸಹಿತ ಮಾಹಿತಿ ನೀಡಬಹುದು.