ಕಾಸರಗೋಡು: ಕೂಡ್ಲು ಸಮೀಪದ ಶೇಷವನ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಕಳೆದ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಉತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತು. ದೇವಸ್ಥಾನ ಆಡಳಿತ ಸಮಿತಿ ಮೊಕ್ತೇಸರ ಕಿರಣ್ ಪ್ರಸಾದ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಶ್ರೀಕ್ಷೇತ್ರದ ಬ್ರಹ್ಮವಾಹಕರಾದ ಕೃಷ್ಣಪ್ರಸಾದ್ಮುಟ್ಟತ್ತೋಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿಪ್ರತಿಭೆಗಳನ್ನು ಅಭಿನಂದಿಸಿದರು. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗ್ರೇಡ್ ಪಡೆದ ಸನಿಹ ಕೆ ಮತ್ತು ಸ್ನೇಹ, ಒಂಬತ್ತು ಎ ಪ್ಲಸ್ ಮತ್ತು ಒಂದು ಎ ಗ್ರೇಡ್ ಪಡೆದ ವೈಷ್ಣವಿ ಕೆ,ಉನ್ನತ ಅಂಕಗಳಿಸಿದ ವರ್ಷಾ ನಾಂಗುರಿ, ಶಿವಾನಿ.ಕೆ, ಸುಷಾಂತ್ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ದೇವಸ್ಥಾನದ ಅನುವಂಶಿಕ ಮೊಕ್ತೇಸರ ಸದಾಶಿವ, ಟ್ರಸ್ಟ್ನಸದಸ್ಯರಾದ ಶಶೀಂದ್ರನ್, ಶರತ್ ನಾಯ್ಕ್, ಸುರೇಶ್ ಅಭಿನಂದನ್, ಸುನಂದ ಉಪಸ್ಥಿತರಿದ್ದರು. ಸನ್ಮಾನಿತರ ಪರವಾಗಿ ಸುರೇಶ್ ಮಣಿಯಾಣಿ, ಸ್ನೇಹಾ, ಮತ್ತು ವೈಷ್ಣವಿಕೆ ಮಾತನಾಡಿದರು. ಟ್ರಸ್ಟ್ನ ಕಾರ್ಯದರ್ಶಿವಸಂತ ನಾಂಗುರಿ ಸ್ವಾಗತಿಸಿ, ಕೋಶಾಧಿಕಾರಿಸುರೇಶ್ ನಾಯ್ಕ್ ವಂದಿಸಿದರು.