ತಿರುವನಂತಪುರ: ಶಬರಿಮಲೆ ಯಾತ್ರೆಗೆ ಆಗಮಿಸುವ ಕೇರಳದ ಭಕ್ತರಲ್ಲಿ ಕೋವಿಡ್ ಖಚಿತಪಟ್ಟವರಿದ್ದರೆ ಉಚಿತ ಚಿಕಿತ್ಸೆ ನೀಡಲು ಸರ್ಕಾರ ಆದೇಶಿಸಿದೆ.
ಆದರೆ ಇತರ ರಾಜ್ಯಗಳಿಂದ ಆಗಮಿಸುವ ಭಕ್ತರಾಗಿದ್ದರೆ ಚಿಕಿತ್ಸೆಗೆ ಮೊತ್ತ ಪಾವತಿಸಬೇಕಾಗುತ್ತದೆ.ಶಬರಿಮಲೆಗೆ ಆಗಮಿಸುವ ಭಕ್ತರಿಗೆ ಈಗಾಗಲೇ ಕೋವಿಡ್ ನಕಾರಾತ್ಮಕ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ.
ಯಾತ್ರಿಕರು ಕೇರಳ ಮೂಲದವನಾಗಿದ್ದರೆ ಶಬರಿಮಲೆ ತಲುಪಿದ ಬಳಿಕ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಎಪಿಎಲ್, ಬಿಪಿಎಲ್ ಬೇಧವಿಲ್ಲದೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಕೋವಿಡ್ ಚಿಕಿತ್ಸೆಗಾಗಿ ಸರ್ಕಾರದೊಂದಿಗೆ ಸಹಕರಿಸುತ್ತಿರುವ ಸರ್ಕಾರಿ ಆಸ್ಪತ್ರೆಗಳು ಅಥವಾ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸೂಚಿಸಿದೆ.
ಇತರ ರಾಜ್ಯ ಯಾತ್ರಿಕರು ಸರ್ಕಾರವು ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ಇರುತ್ತದೆ. ಮತ್ತೊಂದೆಡೆ, ಕೇರಳದ ಯಾತ್ರಾರ್ಥಿಗೆ ಕೋವಿಡ್ ಹೊರತಾದ ಇತರ ಕಾಯಿಲೆಗಳು ಕಂಡುಬಂದರೆ ಚಿಕಿತ್ಸೆ ಉಚಿತವಿರುವುದಿಲ್ಲ. ಚಿಕಿತ್ಸೆ ಎಲ್ಲಿ ಲಭ್ಯವಿದೆ ಎಂಬ ಬಗ್ಗೆ ಸರ್ಕಾರಿ ವೆಬ್ಸೈಟ್ಗಳು ಮಾಹಿತಿಯನ್ನು ನೀಡುತ್ತವೆ. ದೇವಸ್ವಂ ಹಣಕಾಸು ಇಲಾಖೆಯೊಂದಿಗೆ ಚರ್ಚೆ ನಡೆಸಿದ ಬಳಿಕ ಆರೋಗ್ಯ ಸಚಿವಾಲಯ ಈ ಆದೇಶ ಹೊರಡಿಸಿದೆ.