ಬದಿಯಡ್ಕ: ಕುಂಬ್ಡಾಜೆ ಗ್ರಾಪಂ ಅಗಲ್ಪಾಡಿ ವಾರ್ಡಿನಲ್ಲಿ ಕಳೆದ ಐದು ವರ್ಷಗಳಲ್ಲಿ ಅತ್ಯುತ್ತಮ ಜನಸೇವೆಯನ್ನು ಮಾಡಿದ ಪಂ. ಸದಸ್ಯರಾದ ಶಶಿಧರ ತೆಕ್ಕೆಮೂಲೆ ಅವರನ್ನು ನಾಗರೀಕರ ವತಿಯಿಂದ ನೇತೃತ್ವದಲ್ಲಿ ಅಗಲ್ಪಾಡಿಯಲ್ಲಿ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಕಾರ್ಯದರ್ಶಿ ಹರೀಶ ಗೋಸಾಡ, ಬಿಜೆಪಿ ವಾರ್ಡು ಸಂಚಾಲಕ ಗಣೇಶ್ ಭಟ್, ಪ್ರವೀಣ ಪಂಜರಿಕೆ, ವಿನೋದ ಪಂಜರಿಕೆ, ರಾಜೇಶ್, ಎ.ಕೆ. ರಾಜನ್ ಅಗಲ್ಪಾಡಿ, ರಾಜೇಶ್ ಮಾಸ್ತರ್, ಕೃಷ್ಣ ಯಾದವ್ ಮತ್ತಿರರು ಉಪಸ್ಥಿತರಿದ್ದರು.





