HEALTH TIPS

ರಾಜ್ಯದಲ್ಲಿ ಇಂದು 2,616 ಮಂದಿಗೆ ಕೋವಿಡ್-ಕಾಸರಗೋಡು_121 ಮಂದಿಗೆ ಸೋಂಕು ದೃಢ

            ತಿರುವನಂತಪುರ: ರಾಜ್ಯದಲ್ಲಿ ಇಂದು 2616 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 345, ಕೊಲ್ಲಂ 258, ತ್ರಿಶೂರ್ 248, ಎರ್ನಾಕುಳಂ 228, ಕೊಟ್ಟಾಯಂ 224, ಆಲಪ್ಪುಳ 223, ತಿರುವನಂತಪುರ 222, ಕಣ್ಣೂರು 204, ಮಲಪ್ಪುರಂ 171, ಪತ್ತನಂತಿಟ್ಟು 126, ಕಾಸರಗೋಡು 121, ವಯನಾಡ್ 89, ಪಾಲಕ್ಕಾಡ್ 81, ಇಡುಕ್ಕಿ 76 ಎಂಬಂತೆ ಸೋಂಕು ಬಾಧಿಸಿರುವುದು ಗುರುತಿಸಲಾಗಿದೆ. 


           ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಆಗಮಿಸಿದ ಯಾರಲ್ಲೂ ಸೋಂಕು ಕಂಡುಬಂದಿಲ್ಲ. ಯುಕೆ (98) ಮತ್ತು ದಕ್ಷಿಣ ಆಫ್ರಿಕಾ (1) ಎಂಬಂತೆ ಒಟ್ಟು 99 ಜನರಿಗೆ ಈವರೆಗೆ ಸೋಂಕು ಖಚಿತಪಡಿಸಲಾಗಿದ್ದು,  ಪೈಕಿ 83 ಮಂದಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಾಡುಗೊಂಡ ವೈರಸ್ ಇರುವುದು ಪತ್ತೆಯಾಗಿದೆ.

        ಕಳೆದ 24 ಗಂಟೆಗಳಲ್ಲಿ 63,041 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.4.15 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,17,13,060 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

         ಕಳೆದ 24 ಗಂಟೆಗಳಲ್ಲಿ 14 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯ್ನೆ 4,255 ಕ್ಕೆ ಏರಿಕೆಯಾಗಿದೆ. 

         ಇಂದು, ಸೋಂಕು ಪತ್ತೆಯಾದವರಲ್ಲಿ 76 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 2339 ಮಂದಿ ಜನರಿಗೆ ಸೋಂಕು ತಗಲಿತು. 181 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 325, ಕೊಲ್ಲಂ 253, ತ್ರಿಶೂರ್ 241, ಎರ್ನಾಕುಳಂ 207, ಕೊಟ್ಟಾಯಂ 218, ಆಲಪ್ಪುಳ 217, ತಿರುವನಂತಪುರ 147, ಕಣ್ಣೂರು 154, ಮಲಪ್ಪುರಂ 158, ಪತ್ತನಂತಿಟ್ಟು 118, ಕಾಸರಗೋಡು 106, ವಯನಾಡ್ 82, ಪಾಲಕ್ಕಾಡ್ 42, ಇಡುಕ್ಕಿ 71 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

          ಇಪ್ಪತ್ತು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ಕಣ್ಣೂರು 5, ಪತ್ತನಂತಿಟ್ಟು, ಕೋಝಿಕೋಡ್, ಕಾಸರಗೋಡು ತಲಾ 3, ತಿರುವನಂತಪುರ, ಎರ್ನಾಕುಳಂ ತಲಾ 2, ಮಲಪ್ಪುರಂ ಮತ್ತು ವಯನಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. 

       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 4156 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 223, ಕೊಲ್ಲಂ 262, ಪತ್ತನಂತಿಟ್ಟು 320, ಆಲಪ್ಪುಳ 226, ಕೊಟ್ಟಾಯಂ 531, ಇಡಕ್ಕಿ 62, ಎರ್ನಾಕುಳಂ 627, ತ್ರಿಶೂರ್ 357, ಪಾಲಕ್ಕಾಡ್ 81, ಮಲಪ್ಪುರಂ 322, ಕೋಝಿಕೋಡ್ 558, ವಯನಾಡ್ 97, ಕಣ್ಣೂರು 303, ಕಾಸರಗೋಡು 187 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 44,441 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,20,671 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

        ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,89,112 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,82,469 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 6643 ಮಂದಿ  ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಸುಮಾರು 680 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

        ಇಂದು ಹೊಸ ಹಾಟ್‍ಸ್ಪಾಟ್ ಗಳಿಲ್ಲ. ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 358 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries