HEALTH TIPS

ರಾಜ್ಯದಲ್ಲಿ ಇಂದು 2791 ಮಂದಿ ಜನರಿಗೆ ಕೋವಿಡ್ ಸೋಂಕು; 61,764 ಮಾದರಿಗಳ ಪರೀಕ್ಷೆ-ಕಾಸರಗೋಡು:89 ಮಂದಿಗೆ ವೈರಸ್ ಖಚಿತ

                              

          ತಿರುವನಂತಪುರ: ರಾಜ್ಯದಲ್ಲಿ ಇಂದು 2791 ಮಂದಿ ಜನರಿಗೆ ಕೋವಿಡ್ -19 ಖಚಿತವಾಗಿದೆ. ಕಳೆದ 24 ಗಂಟೆಗಳಲ್ಲಿ  16 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್ ನಿಂದ ಮೃತರಾದವರ ಸಂಖ್ಯೆ 4,287 ಕ್ಕೆ ಏರಿಕೆಯಾಗಿದೆ. 

                  ಜಿಲ್ಲಾವಾರು ಅಂಕಿಅಂಶಗಳು:

     ಕೋಝಿಕೋಡ್ 376, ಕೊಲ್ಲಂ 299, ಮಲಪ್ಪುರಂ 286, ಎರ್ನಾಕುಳಂ 237, ತ್ರಿಶೂರ್ 231, ಕೊಟ್ಟಾಯಂ 223, ಪತ್ತನಂತಿಟ್ಟು 222, ಕಣ್ಣೂರು 215, ಆಲಪ್ಪುಳ  206, ತಿರುವನಂತಪುರ 188, ಪಾಲಕ್ಕಾಡ್ 102, ಕಾಸರಗೋಡು 89,ವಯನಾಡ್ 61, ಇಡುಕ್ಕಿ 56 ಎಂಬಂತೆ ಕೊರೊನಾ ದೃಢಪಡಿಸಲಾಗಿದೆ. 

             ಪರೀಕ್ಷಿಸಿದ ಮಾದರಿಗಳು:

      ಕಳೆದ 24 ಗಂಟೆಗಳಲ್ಲಿ 61,764 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.4.52 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,18,40,927 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

            ಚೇತರಿಸಿಕೊಂಡವರು:

     ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 3517 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 368, ಕೊಲ್ಲಂ 249, ಪತ್ತನಂತಿಟ್ಟು 111, ಆಲಪ್ಪುಳ 283, ಕೊಟ್ಟಾಯಂ 370, ಇಡಕ್ಕಿ 203, ಎರ್ನಾಕುಳಂ 333, ತ್ರಿಶೂರ್ 232, ಪಾಲಕ್ಕಾಡ್ 150, ಮಲಪ್ಪುರಂ 342, ಕೊಝಿಕೋಡ್ 412, ವಯನಾಡ್ 87, ಕಣ್ಣೂರು 282, ಕಾಸರಗೋಡು 95 ಎಂಬಂತೆ ಪರೀಕ್ಷೆಗಳು ನೆಗೆಟಿವ್ ಆಗಿದೆ. ಇದರೊಂದಿಗೆ 42,819 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 10,27,826 ಮಂದಿ ಜನರನ್ನು ಕೋವಿಡ್ ನಿಂದ ಮುಕ್ತಗೊಳಿಸಲಾಗಿದೆ.

         ಸಂಪರ್ಕದ ಮೂಲಕ ಸೋಂಕು:  

     ಇಂದು, ಸೋಂಕು ಪತ್ತೆಯಾದವರಲ್ಲಿ 72 ಮಂದಿ ರಾಜ್ಯದ ಹೊರಗಿನಿಂದ ಬಂದವರು. ಸಂಪರ್ಕದ ಮೂಲಕ 2535 ಮಂದಿ ಜನರಿಗೆ ಸೋಂಕು ತಗಲಿತು. 169 ಮಂದಿಯ ಸೋಂಕಿನ ಮೂಲ ಸ್ಪಷ್ಟವಾಗಿಲ್ಲ. ಕೋಝಿಕೋಡ್ 366, ಕೊಲ್ಲಂ 293, ಮಲಪ್ಪುರಂ 275, ಎರ್ನಾಕುಳಂ 229, ತ್ರಿಶೂರ್ 221, ಕೊಟ್ಟಾಯಂ 207, ಪತ್ತನಂತಿಟ್ಟು 205, ಕಣ್ಣೂರು 181, ಆಲಪ್ಪುಳ 202, ತಿರುವನಂತಪುರ 126, ಪಾಲಕ್ಕಾಡ್ 43, ಕಾಸರಗೋಡ್ 77, ವಯನಾಡ್ 57, ಇಡುಕ್ಕಿ 53 ಎಂಬಂತೆ ಸಂಪರ್ಕದಿಂದ ಸೋಂಕು ಉಂಟಾದವರಾಗಿದ್ದಾರೆ. 

        ಹದಿನೈದು ಮಂದಿ ಆರೋಗ್ಯ ಕಾರ್ಯಕರ್ತರಿಗೂ ಸೋಂಕು ದೃಢಪಟ್ಟಿದೆ. ಕೋಝಿಕೋಡ್, ಕಣ್ಣೂರು ತಲಾ 3, ತಿರುವನಂತಪುರ, ಕೊಲ್ಲಂ, ಕಾಸರಗೋಡು ತಲಾ 2, ಕೊಟ್ಟಾಯಂ, ಎರ್ನಾಕುಳಂ ಮತ್ತು ತ್ರಿಶೂರ್ ತಲಾ 1 ಎಂಬಂತೆ ಸೋಂಕಿಗೆ ತುತ್ತಾಗಿದ್ದಾರೆ.

                ನಿರೀಕ್ಷಣೆಯಲ್ಲಿರುವವರು:

     ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,77,062 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,70,954 ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 6,108 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 616 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

           ಇಂದು ಹೊಸ ಹಾಟ್‍ಸ್ಪಾಟ್ ಇಲ್ಲ. ಒಂದು ಪ್ರದೇಶವನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 356 ಹಾಟ್‍ಸ್ಪಾಟ್‍ಗಳಿವೆ.

           ತಳೀಯವಾಗಿ ಮಾರ್ಪಡಿಸಿದ ವೈರಸ್ ಸೋಂಕಿತ ಜನರು:

   ಕಳೆದ 24 ಗಂಟೆಗಳಲ್ಲಿ ಯುಕೆ ಯಿಂದ ಬಂದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ.  ಯುಕೆ (98) ಮತ್ತು ದಕ್ಷಿಣ ಆಫ್ರಿಕಾ (1) ಹೀಗೆ  99 ಜನರಿಗೆ ಈವರೆಗೆ ಸೋಂಕು ಖಚಿತಪಡಿಸಲಾಗಿದ್ದು, ಈ ಪೈಕಿ 83 ಮಂದಿಗಳಿಗೆ ನಕಾರಾತ್ಮಕವಾಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.  


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries