HEALTH TIPS

ಇಂದು ಜನೌಷದಿ ದಿವಸ್ ಸಂಭ್ರಮಾಚರಣೆ-ಪ್ರಧಾನಿಯಿಂದ ಸಂವಾದ,ಅಭಿನಂದನೆ

     
       ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 'ಜನೌಷಧಿ ದಿವಸ್' ಸಂಭ್ರಮಾಚರಣೆಯಲ್ಲಿ ಮಾತನಾಡಲಿದ್ದಾರೆ. ವ ಬೆಳಿಗ್ಗೆ 10 ಗಂಟೆಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರು ಚಾಲನೆ ನೀಡುವರು. ಸಮಾರಂಭದಲ್ಲಿ, ಶಿಲ್ಲಾಂಗ್‌ನ ನೆಗ್ರೀಮ್ಸ್‌ನಲ್ಲಿ 7500 ನೇ ಜನೌಷಧಿ ಕೇಂದ್ರವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ.
      ಪ್ರಧಾನಮಂತ್ರಿ ಭಾರತೀಯ ಜನೌಷಧಿ ಯೋಜನೆಯ ಕಾರ್ಯಕರ್ತರೊಂದಿಗೆ ಸಂವಹನ ನಡೆಸಲಿದ್ದು, ಭಾಗವಹಿಸುವವರಿಗೆ ಅವರ ಅತ್ಯುತ್ತಮ ಕಾರ್ಯಗಳಿಗಾಗಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಮಾರಂಭದಲ್ಲಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಭಾಗವಹಿಸಲಿದ್ದಾರೆ.
      ಜನೌಷಧಿ  ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು, ಮಾರ್ಚ್ 1 ರಿಂದ ಮಾರ್ಚ್ 7 ರವರೆಗೆ ಒಂದು ವಾರದವರೆಗೆ 'ಜನೌಷಧಿ - ಸೇವಾ ಭಿ, ರೋಸ್ಗರ್ ಭಿ' ಎಂಬ ಘೋಷಣೆಯೊಂದಿಗೆ ದೇಶಾದ್ಯಂತ 'ಜನೌಷಧಿ ವಾರ' ಎಂದು ಆಚರಿಸಲಾಗುತ್ತಿದೆ. ವಾರದ ಕೊನೆಯ ದಿನವನ್ನು 'ಜನೌಷಧಿ ದಿವಸ್' ಎಂದು ಆಚರಿಸಲಾಗುತ್ತದೆ.
     ಪ್ರಧಾನ್ ಮಂತ್ರಿ ಭಾರತೀಯ ಜನೌಷದಿ ಪರಿಯೋಜನಾವು ಗುಣಮಟ್ಟದ  ಔಷಧಿಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವ ಯೋಜನೆಯಾಗಿದೆ.  ಔಷಧಿಗಳ ಬೆಲೆಗಳು ಸಂಬಂಧಿತ ಮಾರುಕಟ್ಟೆ ದರಗಳಿಗಿಂತ 50 ಶೇ. ದಿಂದ 90 ಶೇ. ವರೆಗಿನ ಕಡಿತ ಇರುವುದರಿಂದ, 2020-21ರ ಆರ್ಥಿಕ ವರ್ಷದ ಮಾರಾಟವು ಸಾಮಾನ್ಯ ಜನರನ್ನು ಸುಮಾರು 3600 ಕೋಟಿ ರೂ. ಲಾಭ ಗಳಿಕೆಗೆ ಸಾಧ್ಯವಾಗಿದೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ 7499 ಜನ ಔಷಧಿ ಮಳಿಗೆಗಳಿವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries