HEALTH TIPS

ರಾಜ್ಯದಲ್ಲಿ ಇಂದು 2802 ಮಂದಿಗೆ ಕೋವಿಡ್ ಪತ್ತೆ: ಸಂಪರ್ಕದ ಮೂಲಕ 2446 ಜನರಿಗೆ ಸೋಂಕು: ಕಾಸರಗೋಡಲ್ಲಿ ಮತ್ತೆ ಏರಿಕೆ: 190 ಮಂದಿಗೆ ಕೊರೊನಾ ಪತ್ತೆ!

                              

               ತಿರುವನಂತಪುರ: ರಾಜ್ಯದಲ್ಲಿ ಇಂದು 2802 ಮಂದಿ ಜನರಿಗೆ ಕೋವಿಡ್ -19 ಖಚಿತಪಡಿಸಲಾಗಿದೆ. ಕೋಝಿಕೋಡ್ 403, ಎರ್ನಾಕುಳಂ 368, ಕಣ್ಣೂರು 350, ಮಲಪ್ಪುರಂ 240, ಕೊಟ್ಟಾಯಂ 230, ತ್ರಿಶೂರ್ 210, ಕಾಸರಗೋಡು 190, ತಿರುವನಂತಪುರ 185, ಕೊಲ್ಲಂ 148, ಪಾಲಕ್ಕಾಡ್ 133, ಇಡುಕ್ಕಿ 113, ಅಲಪ್ಪುಳ 99, ಪತ್ತನಂತಿಟ್ಟು 74, ವಯನಾಡ್ 59 ಎಂಬಂತೆ ಸೋಂಕು ಬಾಧಿಸಿದೆ. 

          ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ನಿಂದ ಬಂದ ಯಾರಲ್ಲೂ ಕೋವಿಡ್ ಖಚಿತಪಡಿಸಿಲ್ಲ.  ಯುಕೆ (103), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಈವರೆಗೆ ಒಟ್ಟು  111 ಮಂದಿ ಜನರಿಗೆ ಕೋವಿಡ್  ದೃಢಪಡಿಸಲಾಗಿದೆ. ಈ ಪೈಕಿ 104 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

         ಕಳೆದ 24 ಗಂಟೆಗಳಲ್ಲಿ 45,171 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರವು ಶೇ.6.20 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,33,54,944 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

         ಕಳೆದ 24 ಗಂಟೆಗಳಲ್ಲಿ  10 ಮಂದಿ ಸೋಂಕು ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 4668 ಕ್ಕೆ ಏರಿಕೆಯಾಗಿದೆ. 

           ಇಂದು, ಸೋಂಕು ಪತ್ತೆಯಾದವರಲ್ಲಿ 132 ಮಂದಿ ಜನರು ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 2446 ಮಂದಿ ಜನರಿಗೆ ಸೋಂಕು ತಗಲಿದೆ. 208 ಮಂದಿ ಜನರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಕೋಝಿಕ್ಕೋಡ್ 395, ಎರ್ನಾಕುಳಂ 333, ಕಣ್ಣೂರು 270, ಮಲಪ್ಪುರಂ 228, ಕೊಟ್ಟಾಯಂ 214, ತ್ರಿಶೂರ್ 203, ಕಾಸರಗೋಡು 165, ತಿರುವನಂತಪುರ 133, ಕೊಲ್ಲಂ 141, ಪಾಲಕ್ಕಾಡ್ 44, ಇಡುಕ್ಕಿ 110, ಅಲಪ್ಪುಳ  97, ಪತ್ತನಂತಿಟ್ಟು 57, ವಯನಾಡ್ 56 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

         ಇಂದು ಹದಿನಾರು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಟ್ಟಿದೆ.  ಎರ್ನಾಕುಳಂ, ಕಣ್ಣೂರು ತಲಾ 4, ಕಾಸರಗೋಡು 3, ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟು, ತ್ರಿಶೂರ್ ಮತ್ತು ಮಲಪ್ಪುರಂ ತಲಾ 1 ಮಂದಿ ಸೋಂಕಿಗೆ ಒಳಗಾಗಿದ್ದಾರೆ. 

           ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2173 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 152, ಕೊಲ್ಲಂ 210, ಪತ್ತನಂತಿಟ್ಟು 126, ಆಲಪ್ಪುಳ 72, ಕೊಟ್ಟಾಯಂ 143, ಇಡುಕ್ಕಿ 192, ಎರ್ನಾಕುಳಂ 142, ತ್ರಿಶೂರ್ 171, ಪಾಲಕ್ಕಾಡ್ 74, ಮಲಪ್ಪುರಂ 203, ಕೊಝಿಕೋಡ್ 299, ವಯನಾಡ್ 78, ಕಣ್ಣೂರು 250, ಕಾಸರೆಗೋಡು 61 ಎಂಬಂತೆ ನೆಗೆಟಿವ್ ಆಗಿದೆ. ಇದರೊಂದಿಗೆ 27,893 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,02,359 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

            ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,42,854 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,38,451 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 4403 ಮಂದಿ ಆಸ್ಪತ್ರೆಯ ಕಣ್ಗಾವಲಿನಲ್ಲಿದ್ದಾರೆ. ಒಟ್ಟು 554 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

             ಇಂದು 4 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 359 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries