HEALTH TIPS

ರಾಜ್ಯದಲ್ಲಿ ಇಂದು 8126 ಮಂದಿಗೆ ಕೊರೊನಾ ದೃಢ: 2700 ಮಂದಿ ಗುಣಮುಖ: ಪರೀಕ್ಷಾ ಸಕಾರಾತ್ಮಕತೆ ದರ ಶೇ.13.34

                          

          ತಿರುವನಂತಪುರ: ರಾಜ್ಯದಲ್ಲಿ ಇಂದು 8126 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಎರ್ನಾಕುಳಂ 1267, ಕೋಝಿಕೋಡ್ 1062, ತಿರುವನಂತಪುರ 800, ಕೊಟ್ಟಾಯಂ 751, ಮಲಪ್ಪುರಂ 744, ತ್ರಿಶೂರ್ 704, ಕಣ್ಣೂರು 649, ಪಾಲಕ್ಕಾಡ್ 481, ಕೊಲ್ಲಂ 399, ಪತ್ತನಂತಿಟ್ಟು 395, ಆಲಪ್ಪುಳ 345, ಇಡುಕ್ಕಿ 205, ವಯನಾಡ್ 166, ಕಾಸರಗೋಡು 158 ಎಂಬಂತೆ ಸೋಂಕು ದೃಢಪಡಿಸಲಾಗಿದೆ. 

          ಯುಕೆಯಿಂದ ಆಗಮಿಸಿದ ವ್ಯಕ್ತಿಯೊಬ್ಬರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಯುಕೆ (105), ದಕ್ಷಿಣ ಆಫ್ರಿಕಾ (7) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು 113 ಮಂದಿ ಜನರಿಗೆ ಸೋಂಕು ದೃಢಪಡಿಸಲಾಗಿದ್ದು, ಈ ಪೈಕಿ 109 ಮಂದಿಗೆ ನೆಗೆಟಿವ್ ಆಗಿದೆ. ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

            ಕಳೆದ 24 ಗಂಟೆಗಳಲ್ಲಿ 60,900 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕತೆ ದರ ಶೇ.13.34 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿಎಸ್ ಟಿ, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 1,40,13,857 ಮಾದರಿಗಳನ್ನು ಈವರೆಗೆ ಪರೀಕ್ಷೆಗೆ ಕಳುಹಿಸಲಾಗಿದೆ.

          ಕಳೆದ 24 ಗಂಟೆಗಳಲ್ಲಿ  20 ಮಂದಿ ಕೋವಿಡ್ ಬಾಧಿಸಿ ಮೃತಪಟ್ಟಿದ್ದಾರೆ. ಒಟ್ಟು ಕೋವಿಡ್ ನಿಂದಾಗಿ ಈವರೆಗೆ 4,856 ಮಂದಿ ಮೃತಪಟ್ಟಿರುವುದು ದಾಖಲಾಗಿದೆ. 

      ಇಂದು, ಸೋಂಕು ಪತ್ತೆಯಾದವರಲ್ಲಿ 238 ಮಂದಿ ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 7226 ಮಂದಿ ಜನರಿಗೆ ಸೋಂಕು ತಗಲಿತು. 642 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಎರ್ನಾಕುಳಂ 1219, ಕೋಝಿಕೋಡ್ 1033, ತಿರುವನಂತಪುರ 587, ಕೊಟ್ಟಾಯಂ 713, ಮಲಪ್ಪುರಂ 693, ತ್ರಿಶೂರ್ 691, ಕಣ್ಣೂರು 529, ಪಾಲಕ್ಕಾಡ್ 209, ಕೊಲ್ಲಂ 385, ಪತ್ತನಂತಿಟ್ಟು 334, ಆಲಪ್ಪುಳ 340, ಇಡುಕ್ಕಿ 193, ವಯನಾಡ್ 157, ಕಾಸರಗೋಡು 143 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. 

        ಇಂದು ಇಪ್ಪತ್ತು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕಿರುವುದು ದೃಢಪಡಿಸಲಾಗಿದೆ. ಕಣ್ಣೂರು 7, ಪಾಲಕ್ಕಾಡ್ 3, ಪತ್ತನಂತಿಟ್ಟು, ಎರ್ನಾಕುಳಂ, ತ್ರಿಶೂರ್, ಕಾಸರಗೋಡು ತಲಾ 2, ತಿರುವನಂತಪುರ ಮತ್ತು ಮಲಪ್ಪುರಂ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ದೃಢಪಡಿಸಲಾಗಿದೆ. 

         ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2700 ಮಂದಿ ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 512, ಕೊಲ್ಲಂ 103, ಪತ್ತನಂತಿಟ್ಟು 61, ಆಲಪ್ಪುಳ 177, ಕೊಟ್ಟಾಯಂ 253, ಇಡುಕ್ಕಿ 40, ಎರ್ನಾಕುಳಂ 337, ತ್ರಿಶೂರ್ 234, ಪಾಲಕ್ಕಾಡ್ 99, ಮಲಪ್ಪುರಂ 264, ಕೊಝಿಕೋಡ್ 410, ವಯನಾಡ್ 30, ಕಣ್ಣೂರು 119, ಕಾಸರಗೋಡು 61 ಎಂಬಂತೆ ನೆಗೆಟಿವ್ ಆದವರ ವಿವರಗಳಾಗಿದೆ. ಇದರೊಂದಿಗೆ 63,650 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 11,28,475 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

         ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 1,94,808 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 1,85,893 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 8915 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿದ್ದಾರೆ. ಒಟ್ಟು 1479 ಮಂದಿ ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

         ಇಂದು 7 ಹೊಸ ಹಾಟ್‍ಸ್ಪಾಟ್‍ಗಳಿವೆ. 2 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 426 ಹಾಟ್‍ಸ್ಪಾಟ್‍ಗಳಿವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries