HEALTH TIPS

ಇಂದು ರಾಜ್ಯದಲ್ಲಿ 14,672 ಮಂದಿಗೆ ಕೋವಿಡ್ ಪತ್ತೆ: 21,429 ಮಂದಿ ಗುಣಮುಖ: ಸಾವಿನ ಸಂಖ್ಯೆ ಹಾಗೂ ಹಾಟ್ ಸ್ಪಾಟ್ ಗಳಲ್ಲಿ ಭಾರೀ ಏರಿಕೆ: ಪರೀಕ್ಷಾ ಸಕಾರಾತ್ಮಕತೆ ದರ ಶೇ.14.27

                                               

                   ತಿರುವನಂತಪುರ: ರಾಜ್ಯದಲ್ಲಿ ಇಂದು 14,672 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ತಿರುವನಂತಪುರ 2126, ಎರ್ನಾಕುಳಂ 1807, ಮಲಪ್ಪುರಂ 1687, ಕೊಲ್ಲಂ 1648, ಪಾಲಕ್ಕಾಡ್ 1494, ತ್ರಿಶೂರ್ 1417, ಕೋಝಿಕೋಡ್ 960, ಆಲಪ್ಪುಳ 925, ಕಣ್ಣೂರು 640, ಕೊಟ್ಟಾಯಂ 499, ಇಡುಕ್ಕಿ 489, ಕಾಸರಗೋಡು 423, ಪತ್ತನಂತಿಟ್ಟು 359, ವಯನಾಡ್ 198 ಎಂಬಂತೆ ಸೋಂಕು ದೃಢಪಟ್ಟಿದೆ. 

              ಕಳೆದ 24 ಗಂಟೆಗಳಲ್ಲಿ 1,02,792 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.14.27 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಎಲ್.ಎ.ಎಂ.ವಿ. ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,05,07,598 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

              ಕಳೆದ 24 ಗಂಟೆಗಳಲ್ಲಿ ಯುಕೆ, ದಕ್ಷಿಣ ಆಫ್ರಿಕಾ,  ಬ್ರೆಜಿಲ್ ನಿಂದ ಆಗಮಿಸಿದ ಯಾರಿಗೂ ಕೋವಿಡ್ ಖಚಿತಪಡಿಸಿಲ್ಲ. ಯುಕೆ (116), ದಕ್ಷಿಣ ಆಫ್ರಿಕಾ (9) ಮತ್ತು ಬ್ರೆಜಿಲ್ (1) ಎಂಬಂತೆ ಒಟ್ಟು  126 ಮಂದಿ ಜನರಿಗೆ ಈವರೆಗೆ ಸೋಂ|ಕು ದೃಢಪಡಿಸಲಾಗಿದೆ. ಈ ಪೈಕಿ 125 ಮಂದಿಗೆ ನೆಗೆಟಿವ್ ಆಗಿದೆ.  ಒಟ್ಟು 11 ಜನರಿಗೆ ಜೆನೆಟಿಕ್ ಮಾರ್ಪಡಿಸಿದ ವೈರಸ್ ಇರುವುದು ಪತ್ತೆಯಾಗಿದೆ.

             ಕಳೆದ 24 ಗಂಟೆಗಳಲ್ಲಿ ಕೋವಿಡ್ ಬಾಧಿಸಿ  227 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯಾದ್ಯಂತ ಈವರೆಗೆ ಕೋವಿಡ್ ನಿಂದ ಮೃತಪಟ್ಟವರ ಸಂಖ್ಯೆ 9946 ಕ್ಕೆ ಏರಿಕೆಯಾಗಿದೆ. 

            ಇಂದು, ಸೋಂಕು ಪತ್ತೆಯಾದವರಲ್ಲಿ 153 ಮಂದಿ ಜನರು ರಾಜ್ಯದ ಹೊರಗಿಂದ ಬಂದವರು. ಸಂಪರ್ಕದ ಮೂಲಕ 13,638 ಮಂದಿ ಜನರಿಗೆ ಸೋಂಕು ತಗುಲಿತು. 814 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ತಿರುವನಂತಪುರ 1974, ಎರ್ನಾಕುಳಂ 1726, ಮಲಪ್ಪುರಂ 1623, ಕೊಲ್ಲಂ 1643, ಪಾಲಕ್ಕಾಡ್ 963, ತ್ರಿಶೂರ್ 1411, ಕೋಝಿಕೋಡ್ 949, ಆಲಪ್ಪುಳ 922, ಕಣ್ಣೂರು 553, ಕೊಟ್ಟಾಯಂ 462, ಇಡುಕ್ಕಿ 460, ಕಾಸರಗೋಡು 419, ಪತ್ತನಂತಿಟ್ಟು 343, ವಯನಾಡ್ 190 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ.

            ಕಳೆದ 24 ಗಂಟೆಗಳಲ್ಲಿ ಅರವತ್ತೇಳು ಮಂದಿ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ದೃಢಪಡಿಸಲಾಗಿದೆ. ತಿರುವನಂತಪುರ 18, ಕಣ್ಣೂರು 16, ಪಾಲಕ್ಕಾಡ್ 11, ಎರ್ನಾಕುಳಂ 7, ಕೊಲ್ಲಂ 5, ಪತ್ತನಂತಿಟ್ಟು 3, ತ್ರಿಶೂರ್, ಕಾಸರಗೋಡು ತಲಾ 2, ಇಡುಕಿ, ಕೋಝಿಕೋಡ್ ಮತ್ತು ವಯನಾಡ್ ತಲಾ 1 ಎಂಬಂತೆ ಸೋಂಕು ಕಂಡುಬಂದಿದೆ. 

            ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 21,429 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 2304, ಕೊಲ್ಲಂ 1317, ಪತ್ತನಂತಿಟ್ಟು  923, ಆಲಪ್ಪುಳ 2041, ಕೊಟ್ಟಾಯಂ 989, ಇಡುಕ್ಕಿ 714, ಎರ್ನಾಕುಳಂ 1936, ತ್ರಿಶೂರ್ 1472, ಪಾಲಕ್ಕಾಡ್ 1147, ಮಲಪ್ಪುರಂ 5087, ಕೊಝಿಕೋಡ್ 1802, ವಯನಾಡ್ 302, ಕಣ್ಣೂರು 857, ಕಾಸರಗೋಡು 534 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,60,653 ಮಂದಿ ಜನರಿಗೆ ಸೋಂಕು  ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 24,62,071 ಮಂದಿ ಜನರನ್ನು ಕೋವಿಡ್‍ನಿಂದ ಮುಕ್ತಗೊಳಿಸಲಾಗಿದೆ.

             ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 6,54,698 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 6,19,467 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 35,231 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಒಟ್ಟು 2446 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

           ಇಂದು 27 ಹೊಸ ಹಾಟ್‍ಸ್ಪಾಟ್‍ಗಳಿವೆ. 5 ಪ್ರದೇಶಗಳನ್ನು ಹಾಟ್‍ಸ್ಪಾಟ್‍ನಿಂದ ಹೊರಗಿಡಲಾಗಿದೆ. ಪ್ರಸ್ತುತ ಒಟ್ಟು 891 ಹಾಟ್‍ಸ್ಪಾಟ್‍ಗಳಿವೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries