HEALTH TIPS

ಮರ ಕಳ್ಳಸಾಗಣೆ ಪ್ರಕರಣ: ವಿಚಾರಣಾ ಪ್ರಹಸನ: ಪರದೆಯ ಹಿಂದೆ ಭ್ರಷ್ಟರ ದಂಡು: ಕೆ ಸುರೇಂದ್ರನ್

                   ತಿರುವನಂತಪುರ: ಮರ ಕಳ್ಳಸಾಗಣೆ ಕುರಿತು ಸರ್ಕಾರದ ತನಿಖೆ ಪ್ರಹಸನವಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. ಭ್ರಷ್ಟರು ಇನ್ನೂ ಪರದೆಯ ಹಿಂದೆ ಇದ್ದಾರೆ ಎಂದ ಅವರು ಇಂದು ಬಿಜೆಪಿಯು ರಾಜ್ಯವ್ಯಾಪಿ ಆಂದೋಲನವನ್ನು ಉದ್ಘಾಟಿಸಿದರು. ಇತ್ತೀಚಿನ ದಿನಗಳಲ್ಲಿ ಸರ್ಕಾರ ಅತಿದೊಡ್ಡ ಭ್ರಷ್ಟಾಚಾರವನ್ನು ಮಾಡಿದೆ. ನ್ಯಾಯಾಲಯಕ್ಕೆ ಸರ್ಕಾರ ನೀಡಿದ ವರದಿಯಲ್ಲಿ ನಾಮಮಾತ್ರ ಹೊರಬಂದಿದೆ ಎಂದು ಹೇಳುತ್ತದೆ. ಮರಗಳನ್ನು ಕಡಿಯಲು ಅನುಮತಿ ನೀಡುವುದು ರಾಜಕೀಯ ನಿರ್ಧಾರ ಎಂದು ಕಾನಂ ರಾಜೇಂದ್ರನ್ ಒಪ್ಪಿಕೊಂಡಿದ್ದಾರೆ. ಯೋಜಿತ ದರೋಡೆ ನಡೆದಿತ್ತು. ಚುನಾವಣೆಗೆ ಹಣ ಸಂಗ್ರಹಿಸುವ ಉದ್ದೇಶದಿಂದ ಮರ ಕಡಿಯಲು ಅನುಮತಿ ನೀಡಲಾಯಿತು. 

            ಸಿಪಿಎಂ-ಸಿಪಿಐ ನಾಯಕರ ಪಾತ್ರ. ರೈತರಿಗೆ ಸಹಾಯ ಮಾಡುವುದೆಂಬಬುದು ಹಸಿ ಸುಳ್ಳು. ಎಷ್ಟು ಕೋಟಿ ಭ್ರಷ್ಟಾಚಾರ ನಡೆದಿದೆ? ಯಾರಿಗೆ ಹಣ ಸಿಕ್ಕಿತು? ನನಗೆ ಏನೂ ತಿಳಿದಿಲ್ಲ ಎಂಬ ಸಾಮಾನ್ಯ ಪಲ್ಲವಿ ಪುನರಾವರ್ತಿಸದೆ ಸಿಎಂ ಉತ್ತರಿಸಬೇಕು. ಆರೋಪಿಗಳು ಉನ್ನತ ನಾಯಕರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಸಿಪಿಐನ ಎರಡು ವಿಭಾಗಗಳನ್ನು ಬಳಸಿ ದರೋಡೆ ನಡೆಸಿದೆ. ಕಡಿಯಲಾದ ಎಲ್ಲಾ ಮರಗಳನ್ನು ಪೋಲೀಸ್ ಅಧಿಕಾರಿಗಳ ಸಹಾಯದಿಂದ ಕಳ್ಳಸಾಗಣೆ ಮಾಡಲಾಗಿದೆ ಎಂದು ಸುರೇಂದ್ರನ್ ಹೇಳಿದ್ದಾರೆ. ತರಕಾರಿಗಳನ್ನು ಖರೀದಿ¸ಲು ಹೊರತೆರಲಲೂ ಪಾಸ್ ಅಗತ್ಯವಿದ್ದಾಗಲೂ, ನೀವು ವಯನಾಡ್ನಿಂದ ಮರವನ್ನು ಕತ್ತರಿಸಿ ಪೆರುಂಬವೂರಿಗೆ ರವಾನಿಸಿದ್ದೀರಿ. ಮರಗಳನ್ನು ಕಡಿದ ಸ್ಥಳಗಳಲ್ಲಿ ಸಾಕ್ಷ್ಯಗಳನ್ನು ನಾಶಮಾಡುವ ಸಂಚು ನಡೆಯಿತು. ಪೆÇದೆಗಳನ್ನು ಸೀಮೆಎಣ್ಣೆಯಿಂದ ಉರಿಸಿರುವುದನ್ನು ನಾವು ನೋಡಿದ್ದೇವೆ. ಸಂರಕ್ಷಿತ ಅರಣ್ಯದಿಂದ ಎಷ್ಟು ಮರಗಳನ್ನು ಕಡಿದು ಹಾಕಲಾಗಿದೆ ಎಂಬುದನ್ನು ಸರ್ಕಾರ ನಿರ್ದಿಷ್ಟಪಡಿಸಬೇಕು. ಏಕಕಾಲೀನ ಪಟ್ಟಿಯಲ್ಲಿ ಅರಣ್ಯ ಇದ್ದರೂ ಕೇಂದ್ರಕ್ಕೆ ಏಕೆ ಮಾಹಿತಿ ನೀಡಲಿಲ್ಲ ಎಂದು ರಾಜ್ಯ ಉತ್ತರಿಸಬೇಕು.

                ಸಾವಿರ ವಂಚನೆ ಪ್ರಕರಣಗಳಿದ್ದರೂ ಪಿಣರಾಯಿಯ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷರು ಹೇಳಿದರು. ಅವರು ಜೀವನಪೂರ್ತಿ ಜೈಲಿನಲ್ಲಿ ಇರಬೇಕಾದ ವ್ಯಕ್ತಿಯಾಗಿದ್ದು ಪಿಣರಾಯಿಯ ಭ್ರಷ್ಟಾಚಾರ ಬಹಿರಂಗಗೊಳ್ಳಬೇಕು. ಕೊಡಕರ ಮತ್ತು ಮಂಜೇಶ್ವರ ಪ್ರಕರಣಗಳು ಅರಣ್ಯ ಲೂಟಿಯನ್ನು ಮುಚ್ಚಿಹಾಕುವುದಕ್ಕೆ ಎಂಬುದು ಸ್ಪಷ್ಟವಾಗಿದೆ. ಕೊಡಕರದಲ್ಲಿ ಪೋಲೀಸರು ದರೋಡೆಕೋರರನ್ನು ರಕ್ಷಿಸುತ್ತಿದ್ದಾರೆ. ದರೋಡೆ ಹಣವನ್ನು ಪೋಲೀಸ್ ನ್ಯಾಯಾಲಯದಲ್ಲಿ ಹಾಜರುಪಡಿಸುತ್ತಿಲ್ಲ. ಕೇರಳದಲ್ಲಿ ನ್ಯಾಯಾಂಗವು ಸತ್ತಿಲ್ಲ ಎಂದು ಪಿಣರಾಯಿ ಅರ್ಥಮಾಡಿಕೊಳ್ಳಬೇಕು. ಪ್ರಕರಣವನ್ನು ಹಾಳುಗೆಡವುತ್ತಿರುವ ತನಿಖಾ ಅಧಿಕಾರಿಗಳೊಂದಿಗೆ ಬಿಜೆಪಿ ಸಹಕರಿಸುವ ಅಗತ್ಯವಿಲ್ಲ. ಬಲವಾದ ಕಾನೂನು ಕ್ರಮಗಳೊಂದಿಗೆ ಮುಂದುವರಿಯುತ್ತದೆ  ಎಂದು ಸುರೇಂದ್ರನ್ ಹೇಳಿದರು. 

            ಜಿಲ್ಲಾಧ್ಯಕ್ಷ ವಿ.ವಿ.ರಾಜೇಶ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಒ.ರಾಜಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್, ರಾಜ್ಯ ಕಾರ್ಯದರ್ಶಿಗಳಾದ ಕರಮಣ ಜಯನ್, ಸಿ ಶಿವಂಕುಟ್ಟಿ, ಎಸ್.ಸುರೇಶ್, ರಾಜ್ಯ ಉಪಾಧ್ಯಕ್ಷ ವಿ.ಟಿ.ರೆಮಾ, ಖಜಾಂಚಿ ಜೆ.ಆರ್.ಪದ್ಮಕುಮಾರ್ ಮತ್ತು ಒಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಪುಂಚಕರಿ ಸುರೇಂದ್ರನ್ ಉಪಸ್ಥಿತರಿದ್ದರು.

             ಮರ ವಂಚನೆ ಹಗರಣದ ವಿರುದ್ಧ ಬಿಜೆಪಿ ರಾಜ್ಯಾದ್ಯಂತ 15 ಸಾವಿರ ಕೇಂದ್ರಗಳಲ್ಲಿ ಧರಣಿ ನಡೆಸಿದೆ. ಮುಷ್ಕರವು ಕೋವಿಡ್ ಪೆÇ್ರೀಟೋಕಾಲ್ಗೆ ಅನುಸಾರವಾಗಿತ್ತು. ಕೊಲ್ಲಂನಲ್ಲಿ ಕುಮ್ಮನಂ ರಾಜಶೇಖರನ್, ಪತ್ತನಂತಿಟ್ಟದಲ್ಲಿ ಜಾರ್ಜ್ ಕುರಿಯನ್, ಆಲಪ್ಪುಳದಲ್ಲಿÀ ಪಿ.ಸುಧೀರ್, ಎರ್ನಾಕುಳಂನಲ್ಲಿ ಎ.ಎನ್. ರಾಧಾಕೃಷ್ಣನ್, ತ್ರಿಶೂರ್‍ನಲ್ಲಿ ಸಿ.ಕೃಷ್ಣಕುಮಾರ್ ಮತ್ತು ವಯನಾಡ್‍ನಲ್ಲಿ ಪಿ.ಕೆ.ಕೃಷ್ಣದಾಸ್ ಮುಷ್ಕರವನ್ನು ಮುನ್ನಡೆಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries