HEALTH TIPS

ಸಮರಸ ಸಂವಾದ-ಅತಿಥಿ: ಶ್ರೀಮದ್ ಎಡನೀರು ಮಠಾಧೀಶ ಶ್ರೀಶ್ರೀ ಸಚ್ಚಿದಾನಂದ ಭಾರತೀ ಕೋವಿಡ್ ಕಾಲಘಟ್ಟದ ಧಾರ್ಮಿಕ ನಂಬಿಕೆ, ಆಚರಣೆಗಳ ಸಮತೋಲನ

     ಕಳೆದ ಒಂದೂವರೆ ವರ್ಷಗಳಿಂದ ಜಗದಗಲ ಆವರಿಸಿರುವ ಕೋವಿಡ್ ಮಹಾಮಾರಿಯು ತಂದಿರುವ ಆಪತ್ತುಗಳ ಸರಮಾಲೆ ಕೊನೆ ಇಲ್ಲದ್ದು. ಒಂದು ಹಂತದಲ್ಲಿ ನಿಯಂತ್ರಣಕ್ಕೆ ಬರುವ ಸೋಂಕು ಬಳಿಕ ಮತ್ತೆ-ಮತ್ತೆ ಅಡರುತ್ತಿರುವ ತೊಡರಿನಿಂದ ಜನಸಾಮಾನ್ಯರ ಜೀವನ ಸ್ಥಿರತೆ ಕಳಕೊಂಡಿರುವುದೂ ಹೌದು.
            ಭಾರತದಂತಹ ಬಹುಸಂಸ್ಕೃತಿಯ ರಾಷ್ಟç ಈ ಮಹಾಮಾರಿಯನ್ನು ಎದುರಿಸಿದ ಉಪಕ್ರಮಗಳು ನಿಜಕ್ಕೂ ಸ್ತುತ್ಯರ್ಹವೆ. ಹಿಂದೆ ಗ್ರಹಿಸಿದಷ್ಟು ಸಾವು-ನೋವುಗಳು ಸಂಭವಿಸದಿದ್ದರೂ ಹಲವಾರು ಜನರು ಜೀವ-ಜೀವನ ಸಂಕಷ್ಟಕ್ಕೊಳಗಾಗಿದೆ. ಜೊತೆಗೆ ಸೋಂಕು ನಿಯಂತ್ರಣಕ್ಕಾಗಿ ಹೇರುವ ಲಾಕ್ ಡೌನ್ ನಂತಹ ಕ್ರಮಗಳಿಂದ ಜನರು ಮನೆಯಿಂದ ಹೊರ ತೆರಳಲಾರದೆ ಏಕತಾನತೆಯತ್ತ ವಾಲಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ.
           ಈ ನಿಟ್ಟಿನಲ್ಲಿ ನಮ್ಮ ಧಾರ್ಮಿಕ ನಂಬಿಕೆ, ಆಚರಣೆಗಳಲ್ಲೂ ಬದಲಾವಣೆಗಳಾಗಿದ್ದು, ಹಬ್ಬ-ಹರಿದಿನಗಳು, ಆಟ-ಆಯನ ಮೊಟಕುಗೊಂಡಿದೆ. ಮುಖ್ಯವಾಗಿ ದೇವಾಲಯಗಳ ಆಚರಣೆಗಳು, ದೈವ-ಭೂತದ ಕೋಲಗಳು ಸಂಪೂರ್ಣ ಆಚರಣಾ ರಹಿತವಾಗಿದೆ. ಇದರಿಂದಾಗಿ ದೈವ ವಿಶ್ವಾಸಿಗಳಲ್ಲಿ ಹಲವು ಗೊಂದಲ, ಸಂಶಯಗಳಿದ್ದು, ಈ ಬಗ್ಗೆ ಸಮರ್ಥರಿಂದ ನಿರ್ದೇಶನಗಳ ಅಗತ್ಯವಿರುವುದನ್ನು ಮನಗಂಡು ಶ್ರೀಶಂಕರ ಪೀಠಗಳಲ್ಲೇ ಅತ್ಯಂತ ಪ್ರಸಿದ್ದವಾದುವುಗಳಲ್ಲಿ ಒಂದಾದ ಕಾಸರಗೋಡು ಜಿಲ್ಲೆಯ ಶ್ರೀಮದ್ ಎಡನೀರು ಮಠಾಧೀಶರೊಂದಿಗೆ ಸಮರಸ ಸುದ್ದಿ ಆಯೋಜಿಸಿದ ಸಂವಾದ ವೀಕ್ಷಕರಿಗಾಗಿ ಈ ಮೂಲಕ ಪ್ರಸ್ತುತಪಡಿಸುತ್ತಿದ್ದೇವೆ. ವೀಕ್ಷಿಸಿ, ಪ್ರತಿಕ್ರಿಯಿಸಿ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries