HEALTH TIPS

ಸಾಂಸ್ಕøತಿಕ ಕಲ್ಯಾಣ ನಿಧಿಯಲ್ಲಿ ಮಾಧ್ಯಮಗಳ ಸ್ಥಳೀಯ ವರದಿಗಾರರನ್ನು ಸೇರ್ಪಡೆಗೊಳಿಸಲಾಗುವುದು: ಸಚಿವ ಸಾಜಿ ಚೆರಿಯನ್

            ಚೆಂಗನ್ನೂರು: ಮಾಧ್ಯಮ ಕ್ಷೇತ್ರದ ಸ್ಥಳೀಯ ಪತ್ರಕರ್ತರನ್ನು ರಾಜ್ಯ ಸಾಂಸ್ಕೃತಿಕ ಕಲ್ಯಾಣ ನಿಧಿಯಲ್ಲಿ ಸೇರಿಸಲಾಗುವುದು ಎಂದು ಸಂಸ್ಕೃತಿ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ.

                     ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು) ಚೆಂಗನ್ನೂರು ಜಿಲ್ಲಾ ಸಮಿತಿಯ ಗೌರವ ಅಭಿನಂದನೆಯನ್ನು ಇತ್ತೀಚೆಗೆ ಸ್ವೀಕರಿಸಿ ಸಚಿವರು ಮಾತನಾಡುತ್ತಿದ್ದರು.

                  ಕಲ್ಯಾಣ ನಿಧಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಸುದ್ದಿ ಮೂಲಗಳಾಗಿರುವ ಸ್ಥಳೀಯ ಪತ್ರಕರ್ತರಿಗೆ ಸೂಕ್ತ ಪರಿಗಣನೆ ನೀಡಲಾಗುವುದು. ಸರ್ಕಾರದ ಅಭಿವೃದ್ಧಿ ಚಟುವಟಿಕೆಗಳಲ್ಲಿ ಎಲ್ಲಾ ಕ್ಷೇತ್ರಗಳಿಂದ ಪ್ರಾಯೋಗಿಕ ಬೆಂಬಲ ಅಗತ್ಯವಾಗಿದೆ ಎಂದರು.

      ಕೆಜೆಯು ಜಿಲ್ಲಾ ಉಪಾಧ್ಯಕ್ಷ ಎಸ್.ಎಸ್. ಜಮಾಲ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ಸ್ಮಿಜನ್ ಸಮ್ಮೇಳನವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಸಮಿತಿ ಸದಸ್ಯ ಬಾಬು ಥಾಮಸ್ ಮತ್ತು ರಾಜ್ಯ ಉಪಾಧ್ಯಕ್ಷ ಇ.ಪಿ. ರಾಜೀವ್, ಜಿಲ್ಲಾ ಕಾರ್ಯದರ್ಶಿ ವಾಹಿದ್ ಕಟ್ಟನಂ, ಖಜಾಂಚಿ ಕೆ. ಸುರೇಶ್‍ಕುಮಾರ್, ಉಪಾಧ್ಯಕ್ಷ ಸಿ. ಹರಿದಾಸ್ ಮತ್ತು ಪ್ರಾದೇಶಿಕ ಅಧ್ಯಕ್ಷ ಸ್ಯಾಮ್ ಕೆ. ಚಾಕೊ, ಡೊಮಿನಿಕ್ ಜೋಸೆಫ್, ಕೆ. ರಾಜೇಶ್, ತಾಜುದ್ದೀನ್ ಇರಿಕುಳಂ, ವಿಜಯನ್ ಮತ್ತು ಇಕ್ಬಾಲ್ ಮಾತನಾಡಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries