HEALTH TIPS

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆ ಅಂತಿಮವಾಗಿ ಲಕ್ಷದ್ವೀಪದಲ್ಲಿ: ಇಂದು ರಾಜನಾಥ್ ಸಿಂಗ್ ಅನಾವರಣ

                      ಕವರಟ್ಟಿ: ಅಂತಿಮವಾಗಿ, ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಲಕ್ಷದ್ವೀಪದಲ್ಲಿ ಸ್ಥಾಪಿಸಲಾಗಿದೆ. ಇಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ  ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಲು ಅವರು ನಿನ್ನೆ ಕೊಚ್ಚಿಗೆ ಆಗಮಿಸಿರುವರು.  ಈ ಹಿಂದೆ ಗಾಂಧಿ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿತ್ತು, ಆದರೆ ಕೆಲವರು ಇದನ್ನು ಇಸ್ಲಾಮಿಕ್ ವಿರೋಧಿ ಎಂದು ಪ್ರತಿಮೆ ನಿರ್ಮಾಣಕ್ಕೆ ತಡೆ ನೀಡಿದ್ದರು. 

                 ಇಂದು ಗಾಂಧಿ ಜಯಂತಿಗೆ ದ್ವೀಪ ಸರ್ಕಾರವು ವ್ಯಾಪಕ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದೆ. ಮೂರು ದಿನಗಳ ಲೋಕಾರ್ಪಣೆ ಹಬ್ಬ ಸಮಾರೋಪವೂ ಇಂದು ನಡೆಯಲಿದೆ. ಉತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ ಎಂದು ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಹೇಳಿದರು. ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸಚಿವ ರಾಜನಾಥ್ ಸಿಂಗ್ ನಿನ್ನೆ ಕೊಚ್ಚಿ ದಕ್ಷಿಣ ನೌಕಾ ಕೇಂದ್ರ ಕಚೇರಿಗೆ ಆಗಮಿಸಿರುವರು. ಅವರು ಅಧಿಕಾರಿಗಳೊಂದಿಗೆ ಸ್ವಚ್ಛ ಭಾರತ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಕ್ಷದ್ವೀಪಕ್ಕೆ ತೆರಳುತ್ತಾರೆ.

               2010 ರಲ್ಲಿ, ಎರಡನೇ ಯುಪಿಎ ಸರ್ಕಾರ ಲಕ್ಷದ್ವೀಪದ ಕಾವರಂನಲ್ಲಿ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಲು ನಿರ್ಧರಿಸಿತು. ಆದರೆ ಗಾಂಧಿ ಪ್ರತಿಮೆಯನ್ನು ಸ್ಥಾಪಿಸಿದರೆ, ಅದನ್ನು ಹೂವುಗಳಿಂದ ಅಲಂಕರಿಸಬೇಕಾಗುತ್ತದೆ. ಹಿಂದೂ ಸಂಪ್ರದಾಯದಂತೆ ಅಲ್ಲಿ ಪ್ರತಿಮೆ ಸ್ಥಾಪಿಸಲು ಸ್ಥಳೀಯರು ಅವಕಾಶ ನೀಡಲಿಲ್ಲ. ಗಾಂಧಿ ಪ್ರತಿಮೆ ನಿರ್ಮಿಸಲು ಬಿಡೆವೆಂದು ಲಕ್ಷದ್ವೀಪದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

               ಪ್ರತಿಮೆಯನ್ನು 2010 ರ ಸೆಪ್ಟೆಂಬರ್‍ನಲ್ಲಿ ಕವರಟ್ಟಿಗೆ ತರಲಾಯಿತು. ಆದರೆ ಲಕ್ಷದ್ವೀಪದ ಜನರು ಅದನ್ನು ಅನಾವರಣಗೊಳಿಸಲು ಅನುಮತಿಸಲಿಲ್ಲ. ಮರುದಿನ, ಪ್ರತಿಮೆಯನ್ನು ಕವರಟ್ಟಿಯಿಂದ ಅದೇ ಹಡಗಿನಲ್ಲಿ ಕೊಚ್ಚಿಗೆ ಹಿಂತಿರುಗಿಸಲಾಯಿತು. ಕೊಚ್ಚಿಗೆ ಬಂದಾಗ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ಸಂಘಟನೆಗಳು ಪ್ರತಿಭಟಿಸಿದವು. ಲಕ್ಷದ್ವೀಪ ಭಾರತದ ಭಾಗವಾಗಿದ್ದರೆ, ಅಲ್ಲಿ ರಾಷ್ಟ್ರಪಿತನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು. ಹಾಗಾಗಿ ಅದೇ ಪ್ರತಿಮೆಯನ್ನು ಕವರಟ್ಟಿಗೆ ಮರಳಿ ತರಲಾಯಿತು.

            ಅಕ್ಟೋಬರ್ 1 ರಂದು ಕವರಟ್ಟಿಗೆ ಬಂದ ಹಡಗಿನಲ್ಲಿ ಪ್ರತಿಮೆಯನ್ನು ಆಡಳಿತಾಧಿಕಾರಿ ಮನೆಯಲ್ಲಿ ಅಡಗಿಸಿಡಲಾಗಿತ್ತು. ಆಡಳಿತಗಾರನ ಮನೆಯಲ್ಲಿ ಗಾಂಧಿಯವರ ಪ್ರತಿಮೆಯನ್ನು ದೀರ್ಘಕಾಲ ಮರೆಮಾಡಲಾಗಿದೆ. 11 ವರ್ಷಗಳ ಕಾಲ ಗಾಂಧಿ ಪ್ರತಿಮೆಯನ್ನು ಲಕ್ಷದ್ವೀಪದಲ್ಲಿ ಎಲ್ಲಿಯೂ ಸ್ಥಾಪಿಸಲಾಗಲಿಲ್ಲ. ಈ ಎಲ್ಲ ಪ್ರತಿಭಟನೆಗಳನ್ನು ಕೇಂದ್ರ ಸರ್ಕಾರ ಹತೋಟಿಗೆತಂದು ಇಂದು ಗಾಂಧಿ ಪ್ರತಿಮೆ ಲೋಕಾರ್ಪಣೆಗೊಳ್ಳುತ್ತಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries