ನವದೆಹಲಿ: ಸೂಕ್ತ ಮೂಲಸೌಕರ್ಯ ಹೊಂದಿರುವ ಆಸ್ಪತ್ರೆಗಳಲ್ಲಿ ಸೂರ್ಯಾಸ್ತದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರವು ಅನುಮತಿ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ನರಹತ್ಯೆ, ಆತ್ಮಹತ್ಯೆ, ಅತ್ಯಾಚಾರ, ಕೊಳೆತ ಮೃತದೇಹಗಳು ಮತ್ತು ದುರ್ಬಳಕೆಯಾಗಿರುವ ಶಂಕಿತ ದೇಹಗಳನ್ನು ಹೊರತುಪಡಿಸಿ ಇತರ ಮೃತದೇಹಗಳನ್ನು ಸೂರ್ಯಾಸ್ತದ ಬಳಿಕವೂ ಮರಣೋತ್ತರ ಪರೀಕ್ಷೆಗೆ ಒಳಪಡಿಸುವ ಸಂಭವ ಇದೆ.