HEALTH TIPS

ಬಿಪಿನ್ ರಾವತ್ ಹೆಲಿಕಾಪ್ಟರ್ ಪತನವಾದ ದಿನ ಕೊಯಮತ್ತೂರಿನಲ್ಲಿ ಗುಂಡಿನ ಪಾರ್ಟಿ; ಕೇರಳೀಯರು ನಾಯಕತ್ವ ವಹಿಸಿರುವ ಸೂಚನೆ: ಸೇನೆಯಿಂದ ತನಿಖೆ ಆರಂಭ

                 ಕೊಯಮತ್ತೂರು; ಕೂನೂರಿನಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ, ಸೇನಾ ಪಡೆಗಳ ಜಂಟಿ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನಾ ಅಧಿಕಾರಿಗಳು ಸಾವನ್ನಪ್ಪಿದ ಸಂದರ್ಭದಲ್ಲಿ ಕೊಯಮತ್ತೂರಿನಲ್ಲಿ ಕುಡಿದು ಪಾರ್ಟಿ ನಡೆಸಲಾಗಿತ್ತು. ಇದರ ಹಿಂದೆ ಕೇರಳೀಯರಿದ್ದರು ಎಂಬ À ಸೂಚನೆಗಳಿವೆ.

                ಕೊಯಮತ್ತೂರಿನ ಮೂರು ಕಾಲೇಜುಗಳ ಕ್ಯಾಂಟೀನ್‍ಗಳನ್ನು ನಡೆಸುತ್ತಿರುವ ಮಲಯಾಳಿಗಳು ಸೈನಿಕರ ವೀರ ಮರಣವನ್ನು ಆಚರಿಸಲು  ಗುಂಡಿನ ಪಾರ್ಟಿ ಆಯೋಜಿಸಿದ್ದರು ಎನ್ನಲಾಗಿದೆ.

                 ನೂರಾರು ಮಂದಿ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಏಜೆನ್ಸಿಗಳು ಅಪರಾಧಿಗಳು ಮತ್ತು ಭಾಗವಹಿಸಿದವರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಿವೆ.

                ಬಿಪಿನ್ ರಾವತ್ ಸಾವಿನ ಕುರಿತು ದ್ವೇಷಪೂರಿತ ಕಾಮೆಂಟ್‍ಗಳನ್ನು ಮಾಡಿದ್ದಕ್ಕಾಗಿ ಹಲವಾರು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಇದರ ಬೆನ್ನಲ್ಲೇ ಸೈನಿಕರ ಸಾವಿನ ಸಂಭ್ರಮಾಚರಣೆಗೆ ಕುಡಿತದ ಪಾರ್ಟಿ ನಡೆದಿದೆ ಎಂಬ ವರದಿಗಳು ಬಂದಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries