HEALTH TIPS

ಕಣ್ಣೂರು ವಿಸಿ ಮರು ನೇಮಕ; ಪಿಣರಾಯಿ ಸರ್ಕಾರಕ್ಕೆ ತಾತ್ಕಾಲಿಕ ಪರಿಹಾರ; ಅರ್ಜಿ ಕಾನೂನು ಬದ್ಧವಲ್ಲ: ಹೈಕೋರ್ಟ್


       ಕೊಚ್ಚಿ: ಕಣ್ಣೂರು ವಿಶ್ವವಿದ್ಯಾನಿಲಯದ ಉಪಕುಲಪತಿ  ಗೋಪಿನಾಥ್ ರವೀಂದ್ರನ್ ಅವರ
 ಮರುನೇಮಕವನ್ನು ಪ್ರಶ್ನಿಸಿ ಸೆನೆಟರ್ ಹಾಗೂ ಇತರರು ಸಲ್ಲಿಸಿರುವ ಅರ್ಜಿ ಕಾನೂನಾತ್ಮಕವಾಗಿ ಸರಿಯಲ್ಲ ಎಂದು ಹೈಕೋರ್ಟ್ ನ   ಏಕ ಪೀಠ ಹೇಳಿದೆ.  ಈ ಅರ್ಜಿಯನ್ನು ನ್ಯಾಯಮೂರ್ತಿ ಅಮಿತ್ ರಾವಲ್ ವಿಚಾರಣೆ ನಡೆಸಿದರು.  ಗೋಪಿನಾಥ್ ರವೀಂದ್ರನ್ ಅವರ ನೇಮಕವನ್ನು ರದ್ದುಗೊಳಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
       ವಿಸಿ ನೇಮಕ ವಿಚಾರವಾಗಿ ತೀವ್ರ ಟೀಕೆ ಹಾಗೂ ವ್ಯಾಪಕ ಪ್ರತಿಭಟನೆ ಎದುರಿಸಿದ್ದ ಪಿಣರಾಯಿ ಸರಕಾರಕ್ಕೆ ಇದರಿಂದ ತಾತ್ಕಾಲಿಕ ನೆಮ್ಮದಿ ಸಿಕ್ಕಂತಾಗಿದೆ.  ಈ ಹಿಂದೆಯೇ ಅರ್ಜಿಯ ಪ್ರಾಥಮಿಕ ವಾದಗಳು ಪೂರ್ಣಗೊಂಡಿದ್ದವು.  ಕಣ್ಣೂರು ವಿಶ್ವವಿದ್ಯಾನಿಲಯ ಕಾಯ್ದೆ ಮತ್ತು ಯುಜಿಸಿ ನಿಯಮಗಳನ್ನು ಉಲ್ಲಂಘಿಸಿ ಗೋಪಿನಾಥ್ ರವೀಂದ್ರನ್ ಅವರನ್ನು ವಿಸಿ ಆಗಿ ಮರು ನೇಮಕ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
      ವಿಸಿ ನೇಮಕಕ್ಕೆ ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಅವರ ಕ್ರಮವೂ ವಿವಾದಕ್ಕೀಡಾಗಿತ್ತು.  ಈ ನೇಮಕಾತಿ ಕಾನೂನು ಬಾಹಿರವಲ್ಲ ಮತ್ತು ಇದು ಮರುನೇಮಕವೇ ಹೊರತು ಹೊಸ ನೇಮಕಾತಿಯಲ್ಲ ಎಂದು ಸರ್ಕಾರ ಹೇಳಿಕೊಂಡಿದೆ.  ಆದರೆ, ಏಕ ಪೀಠದ ಆದೇಶದ ವಿರುದ್ಧ ಅರ್ಜಿದಾರರು ವಿಭಾಗೀಯ ಪೀಠವನ್ನು ಸಂಪರ್ಕಿಸುವ ಸೂಚನೆಗಳಿವೆ.ಥಗತಷ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries