HEALTH TIPS

ಕಾಸರಗೋಡು ಸ್ಕೌಟು ಗೈಡ್ ಸ್ನೇಹ ಭವನಕ್ಕೆ ಚಾಲನೆ

           ಕಾಸರಗೋಡು: ಕೇರಳ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ವಿಷನ್ 2021-26ರಂತೆ ಕೇರಳಾದ್ಯಂತ ಪ್ರತಿ ಉಪಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ ಸುಮಾರು 200 ಮನೆಗಳನ್ನು ನಿರ್ಮಿಸುವ ಸ್ನೇಹ ಭವನ ಯೋಜನೆಯನ್ನು ಕೈಗೆತ್ತಿಕೊಂಡಿದೆ. 


          ಈ ಯೋಜನೆಯನ್ವಯ ಕಾಸರಗೋಡು ಉಪಜಿಲ್ಲೆಯ ಸ್ನೇಹ ಭವನ ಯೋಜನೆಯ ಮನೆ ಬಂದಡ್ಕ ಶಾಲೆಯ ವಿಶ್ವಜಿತ್ ಎಂಬ ಮಗುವಿಗೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಅದರ ಅಡಿಪಾಯದ ಕೆಲಸ ಪೂರ್ಣಗೊಂಡು ಮಣ್ಣು ತುಂಬಿಸುವ ಕೆಲಸ ಇತ್ತೀಚೆಗೆ ಜರಗಿತು. ಚಂದ್ರಗಿರಿ ರೋವರ್ಸ್ ಮತ್ತು ರೇಂಜರ್ಸ್ ಗಳು ಈ ಕೆಲಸವನ್ನು ನಿರ್ವಹಿಸಿದರು. ರೋವರ್ಸ್ ವಿಭಾಗದ ರಾಜ್ಯ ಆಯುಕ್ತರಾದ ಅಜಿತ್ ಕಳನಾಡ್, ಕೇರಳ ರಾಜ್ಯ ಸಹ ಸಂಘಟನಾ ಆಯುಕ್ತ ಪಿ. ಪ್ರಶಾಂತ್, ಜಿಲ್ಲಾ ಸಹ ಕಾರ್ಯದರ್ಶಿ ಕಿರಣ್ ಪ್ರಸಾದ್ ಕೂಡ್ಲು, ಜಿಲ್ಲಾ ತರಬೇತಿ ಆಯುಕ್ತ ಸ್ಕೌಟ್ ಸಾಬುತೋಮಸ್,  ಜಿಲ್ಲಾ ತರಬೇತಿ ಆಯುಕ್ತೆ ಗೈಡ್ ಅನಿತ ಎಂ ನಾಯರ್, ರೋವರ್ ಲೀಡರ್ ಅರುಣ್ ದಾಸ್, ರೇಂಜರ್ ಲೀಡರ್ ತಂಗಮಣಿ ಮತ್ತು ರಂಜಿನಿ ನೇತೃತ್ವ ವಹಿಸಿದರು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries