ಕೊಟ್ಟಾಯಂ: ಸಂಚರಿಸುತ್ತಿದ್ದ ರೈಲಿನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಘಟನೆ ನಡೆದಿದೆ. ಕೊಟ್ಟಾಯಂನ ಕೊತ್ತನಲ್ಲೂರು ಬಳಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ.
ತಿರುವನಂತಪುರಂ-ಹೊಸದಿಲ್ಲಿ ಕೇರಳ ಎಕ್ಸ್ ಪ್ರೆಸ್ ರೈಲಿನ ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ತಕ್ಷಣ ರೈಲು ನಿಲ್ಲಿಸಿ ಪ್ರಯಾಣಿಕರನ್ನು ಸ್ಥಳಾಂತರಿಸಲಾಯಿತು.
ನಿನ್ನೆಯಷ್ಟೇ ಪಾಲಕ್ಕಾಡ್ನ ಪುದುಕ್ಕಾಡ್ ಬಳಿ ಗೂಡ್ಸ್ ರೈಲು ಹಳಿತಪ್ಪಿದ ಬೆನ್ನಿಗೇ ರೈಲಿನ ಮೇಲೆ ವಿದ್ಯುತ್ ತಂತಿ ಬಿದ್ದ ಘಟನೆ ಆತಂಕಕ್ಕೆ ಕಾರಣವಾಗಿದೆ. ಮಾರ್ಗ ವೈತ್ಯಯದ ಕಾರಣ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಯಿತು ಮತ್ತು ಗಂಟೆಗಳ ಕಾಲ ತಡೆಹಿಡಿಯಲಾಯಿತು.