HEALTH TIPS

ತಲಶ್ಶೇರಿಯಲ್ಲಿ ಸಿಪಿಎಂ ಕಾರ್ಯಕರ್ತನ ಹತ್ಯೆ


        ತಲಶ್ಶೇರಿ: ತಲಶ್ಶೇರಿ ಪುನ್ನೋಲ್‌ನಲ್ಲಿ ಸಿಪಿಎಂ ಕಾರ್ಯಕರ್ತನನ್ನು ಕಡಿದು ಹತ್ಯೆ ಮಾಡಲಾಗಿದೆ.  ಮೃತರನ್ನು ಕೊರಂಬದ ಕುಣಿಯಿಲ್ ಹರಿದಾಸನ್ (54) ಎಂದು ಗುರುತಿಸಲಾಗಿದೆ.  ಬೆಳಗಿನ ಜಾವ 1.30ರ ಸುಮಾರಿಗೆ ಈ ಘಟನೆ ನಡೆದಿದೆ.  ಹತ್ಯೆಯ ಹಿಂದೆ ಆರ್‌ಎಸ್‌ಎಸ್ ಕೈವಾಡವಿದೆ  ಎಂದು ಸಿಪಿಎಂ ಆರೋಪಿಸಿದೆ.  ಘಟನೆಯನ್ನು ವಿರೋಧಿಸಿ ನ್ಯೂಮಾಹಿ ಮತ್ತು ತಲಶ್ಶೇರಿಯಲ್ಲಿ ಹರತಾಳ ಘೋಷಿಸಲಾಗಿತ್ತು.
       ಮೃತ ಹರಿದಾಸನ್ ಸಿಪಿಎಂನ ಸಕ್ರಿಯ ಸದಸ್ಯರಾಗಿದ್ದರು.  ಮೀನುಗಾರ ಹರಿದಾಸನ್ ರಾತ್ರಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಭೀಕರ ಹತ್ಯೆ ನಡೆದಿದೆ.  ಹರಿದಾಸನ್ ಅವರ ಮನೆ ಮುಂದೆ ಜನರ ಗುಂಪೊಂದು ಹೊಂಚು ಹಾಕಿ ದಾಳಿ ನಡೆಸಿದೆ ಎಂದು ವರದಿಯಾಗಿದೆ.  ಒಂದು ಕಾಲು ತುಂಡಾಗಿದೆ.  ದೇಹಕ್ಕೆ ಹಲವಾರು ಗಾಯಗಳಾಗಿವೆ.
         ಸ್ಥಳೀಯರು ಆತನನ್ನು ತಲಶ್ಶೇರಿ ಸಹಕಾರಿ ಆಸ್ಪತ್ರೆಗೆ ಕರೆದೊಯ್ದರೂ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು.  ಬಳಿಕ ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.  ಕ್ಷೇತ್ರದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದು ಬಂದಿದೆ.
     ನಾಲ್ವರು  ಹಂತಕರು  ಬೈಕ್ ನಲ್ಲಿ ಆಗಮಿಸಿ ಹತ್ಯೆಗ್ಯೆದಿದ್ದು ಅವರನ್ನು  ಪೊಲೀಸರು ಗುರುತಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries