HEALTH TIPS

ಎ.1. ಕಾರ್ಕಳದಲ್ಲಿ 2021ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರದಾನ: ಗಡಿನಾಡಿನ ಮೂವರಿಗೆ ಪ್ರಶಸ್ತಿ ಪಡೆಯುವ ಸುಯೋಗ

     

                ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು  ಅಕಾಡೆಮಿಯು 2021ನೇ ಸಾಲಿನ ವಾರ್ಷಿಕ ಪ್ರಶಸ್ತಿ ಹಾಗೂ 2020ನೇ ಸಾಲಿನ ಪುಸ್ತಕ ಬಹುಮಾನ ಈಗಾಗಲೇ ಘೋಷಿಸಿದ್ದು ಎಪ್ರಿಲ್ ಒಂದರಂದು ಕಾರ್ಕಳದಲ್ಲಿ  ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.  ಇದೇ ಮೊದಲ ಬಾರಿಗೆ ಗಡಿನಾಡು ಕಾಸರಗೋಡಿನ ಮೂವರಿಗೆ ಏಕಕಾಲದಲ್ಲಿ ವಿವಿಧ ಯಕ್ಷಗಾನ ಪ್ರಶಸ್ತಿ ಲಭಿಸಿದ್ದು, ಗಡಿನಾಡು ಕಾಸರಗೋಡಿನ ಮೂವರು ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪಡೆಯುವ ಅವಕಾಶ ಲಭ್ಯವಾಗಿದೆ. 

            2021ನೇ ಸಾಲಿನ ಪ್ರತಿಷ್ಠಿತ ಯಕ್ಷಸಿರಿ ಪ್ರಶಸ್ತಿಗೆ ಖ್ಯಾತ ಯಕ್ಷಗಾನ ಹಿಮ್ಮೇಳ ಮುಮ್ಮೇಳ ಗುರುಗಳಾಗಿರುವ ಹಾಗೂ ಹಿಮ್ಮೇಳ ಕಲಾವಿದ ಸುಮಾರು ನಲುವತ್ತು ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಉಪ್ಪಳ ಸಮೀಪದ ರಾಮ ಸಾಲಿಯಾನ್ ಮಂಗಲ್ಪಾಡಿ, ಹಾಗೂ ಮೂಲತ ಮಂಜೇಶ್ವರ ಸಮೀಪದ ಮೂಡಂಬೈಲು ಗ್ರಾಮದ ದಡ್ಡಂಗಡಿಯಲ್ಲಿ ಜನಿಸಿ ಇದೀಗ ಮಂಗಳೂರಲ್ಲಿ ವಾಸವಾಗಿರುವ ಹಿರಿಯ ಕಲಾವಿದ ಸುಮಾರು ಐವತ್ತೈದು ವರ್ಷಗಳಿಂದ ಯಕ್ಷಗಾನ ಸೇವೆಗೈಯುತ್ತಾ, ಇದೀಗ ಬೆಂಕಿನಾಥೇಶ್ವರ ಮೇಳದಲ್ಲಿ ಸೇವೆ ಗೈಯುತ್ತಿರುವ   ಬೋಳಾರ ಸುಬ್ಬಯ್ಯ ಶೆಟ್ಟಿ , ಯಕ್ಷಗಾನ ಪುಸ್ತಕ ಬಹುಮಾನ ಪ್ರಶಸ್ತಿ ಪುರಸ್ಕøತರಾದ ಹಿರಿಯ ಅರ್ಥಧಾರಿ ,ಕನ್ನಡ ಹೋರಾಟಗಾರ  ಕವಿ ಸಾಹಿತಿ ವೈದ್ಯ ಡಾ.ರಮಾನಂದ ಬನಾರಿ. ಶ್ರೀಯುತರ ಅರ್ಥಾಯನ ಕೃತಿಗೆ ಪ್ರಶಸ್ತಿ  ಲಭಿಸಿದೆ. ಹೀಗೆ ಇದೊಂದು ಗಡಿನಾಡಿಗೆ ಹೆಮ್ಮೆಯ ವಿಚಾರ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries