ಕಾಸರಗೋಡು: ನಾರೀ ಶಕ್ತಿ ನಾಡಿನ ಶಕ್ತಿಯಾಗಿದ್ದು, ಮಹಿಳೆಯರಿಗೆ ಸಮಾಧಾನ ಹಾಗೂ ನಿರ್ಭಯ ಜೀವನ ನಡೆಸುವ ಬಗ್ಗೆ ಸಮಾಜ ಮತ್ತು ಸರ್ಕಾರ ಭರವಸೆ ಒದಗಿಸುವುದು ಅನಿವಾರ್ಯ ಎಂದು ಬಿಎಂಎಸ್ ರಾಷ್ಟ್ರೀಯ ಕಾರ್ಯದರ್ಶಿ ವಿ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಎಂಎಸ್ ಜಿಲ್ಲಾ ಘಟಕ ವತಿಯಿಂದ ಕಾಸರಗೋಡು ನಗರಸಭಾಂಗಣದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಿಳಾ ಸಂಗಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎನ್ಜಿಓ ಸಂಘ್ ಮಹಿಳಾ ವಿಭಾಗ ರಾಜ್ಯ ಘಟಕ ಅಧ್ಯಕ್ಷೆ ಆರ್ಯಾ ದೀಪ ಬೆಳಗಿಸಿದರು. ಶೋಭಾ ನಾಯ್ಕಾಪು ಅಧ್ಯಕ್ಷತೆ ವಹಿಸಿದ್ದರು. ಬಿಎಂಎಸ್ ಜಿಲ್ಲಾ ಜತೆಕಾರ್ಯದರ್ಶಿ ಸಿಂಧೂ ಸ್ವಾಗತಿಸಿದರು. ಖ್ಯಾತ ಉದ್ಯಮಿ ಬಿಂದೂದಾಸ್ ಅವರು ಯೋಗದಲ್ಲಿ ಉತ್ತಮ ಸಾಧನೆ ತೋರಿದ ಅಭಿಜ್ಞಾ, ಹರೀಶ್ ಅವರನ್ನು ಅಭಿನಂದಿಸಿದರು.

