ತಿರುವನಂತಪುರ; ಎರಡು ತಿಂಗಳ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ನಿಧಿ ಪಿಂಚಣಿಯನ್ನು ಒಟ್ಟಿಗೆ ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಇದಕ್ಕಾಗಿ 1,746.44 ಕೋಟಿ ರೂ. ಮೀಸಲಿಡಲಾಗಿದೆ. ಏಪ್ರಿಲ್ 14ರೊಳಗೆ ಪಿಂಚಣಿ ವಿತರಣೆ ಪೂರ್ಣಗೊಳ್ಳಲಿದೆ.
56,97,455 ಮಂದಿಗೆ ತಲಾ 3,200 ರೂ. ವಿತರಿಸಲಾಗುವುದು. ಮಾರ್ಚ್ ತಿಂಗಳ ಕಂತಿನ ಜೊತೆಗೆ ಏಪ್ರಿಲ್ ಕಂತು ಪಾವತಿಸಲಾಗುತ್ತಿದೆ. ಈ ನಿರ್ಧಾರವು ಮಾರುಕಟ್ಟೆ ಹೆಚ್ಚು ಸಕ್ರಿಯವಾಗಲು ಮತ್ತು ಜನರು ಸಂತೋಷದಿಂದ ವಿಷು ಆಚರಿಸಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ಪಿಣರಾಯಿ ವಿಜಯನ್ ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.