HEALTH TIPS

ಐತಿಹಾಸಿಕ ತ್ರಿಶೂರ್ ಪೂರಂ ಇಂದು


      ತ್ರಿಶೂರ್:  ತ್ರಿಶೂರ್ ಪೂರಂ ಇಂದು ನಡೆಯಲಿದ್ದು, ಹಬ್ಬಗಳ ಹಬ್ಬ ಎಂಬ ಹೆಸರಿದೆ.  ಕಣಿಮಂಗಲಂ ಶಾಸ್ತಾವು ಬನದಿಂದ ವಡಕ್ಕುನಾಥ ದೇವಸ್ಥಾನಕ್ಕೆ ಮೆರವಣಿಗೆ ನಡೆಯಲಿದೆ.  ಕಣಿಮಂಗಲಂ ಶಾಸ್ತಾರ ಉದಯದೊಂದಿಗೆ ಪೂರಂ ಪ್ರಾರಂಭವಾಗುತ್ತದೆ.  ಧಾರಾಕಾರ ಮಳೆ ಸುರಿಯುತ್ತಿದೆ.  ಪೂರಂ ಮಳೆಯ ಭೀತಿಯಲ್ಲಿದೆ.  ಸಣ್ಣಪುಟ್ಟ ಆಚರಣೆಗಳು ಆರಂಭಗೊಂಡಿದೆ.  ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ  ಸರಳವಾಗಿ ನಡೆಸಲಾಗಿತ್ತು.  ಆದರೆ ಈ ಬಾರಿ ಎಲ್ಲಾ ಸಂಭ್ರಮಗಳೂ ಮತ್ತೆ ಕಳೆಗಟ್ಟಲಿವೆ.
       ಎರ್ನಾಕುಳಂ ಶಿವಕುಮಾರ್ ಎಂಬ ಮಹಾಗಜ ನಿನ್ನೆ ತೆಂಕು  ಗೋಪುರದ ಬಾಗಿಲನ್ನು ತೆರೆದು ನೀತಲಕಾವಿಲಮ್ಮನ ಸಹಾಯದಿಂದ ಚಾಲನೆ ನೀಡುವ ಸುಂದರ ನೋಟದೊಂದಿಗೆ ನಿನ್ನೆ ತ್ರಿಶೂರ್ ಪೂರಂ ಆರಂಭವಾಯಿತು.  ವಡಕ್ಕುನಾಥನ್ ಸುತ್ತಲೂ ಪ್ರದಕ್ಷಿಣೆ  ಬಂದನು.  ಈ ದೃಶ್ಯವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
      ಇಂದು ಬೆಳಗ್ಗೆ 11.30ಕ್ಕೆ ಮಠಕ್ಕೆ ಪಂಚವಾದ್ಯ ಆಗಮಿಸಲಿದೆ.  ಮಧ್ಯಾಹ್ನ 12 ಗಂಟೆಗೆ ಪರಮೇಕಾವಿಲಮ್ಮನ ರಥೋತ್ಸವ ಆರಂಭವಾಗಲಿದೆ.  ಎರಡು ಗಂಟೆಗೆ ವಿವಿಧ ವಿಧಿಗಳು ನಡೆಯಲಿವೆ.  ಸಂಜೆ 5 ಗಂಟೆಗೆ ಕೂಟಮಾರು ಎಂಬ ಆಚರಣೆ ಆರಂಭವಾಗಲಿದೆ.  ನಾಳೆ ಬೆಳಗಿನ ಜಾವ 3 ಗಂಟೆಗೆ ಪೂರಂ ಪಟಾಕಿ ಸಿಡಿಸಲಾಗುವುದು.  ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ತಿರುವಂಬಾಡಿ ಸಿಡಿಮದ್ದು ಪ್ರದರ್ಶನದ ನೇತೃತ್ವ ವಹಿಸಲಿದ್ದಾರೆ.  ಬುಧವಾರ ಮಧ್ಯಾಹ್ನ ಪೂರಂಗೆ ತೆರೆಬೀಳಲಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries