ಭಾರೀ ನಿರೀಕ್ಷೆಯಲ್ಲಿ ವರ್ಷಗಳ ಹಿಂದೆಯೇ ಆರಂಭಗೊಂಡ ಕುಂಬಳೆ- ಮುಳ್ಳೇರಿಯ ದ್ವಿಪಥ ಮೆಕ್ಡಾಂ ಡಾಮರೀಕರಣ ಕಾಮಗಾರಿ ಕುಂಟುತ್ತಾ ಸಾಗಿದ್ದರ ಪರಿಣಾಮ ಇದೀಗ ಹಲವೆಡೆ ವ್ಯಾಪಕ ರಸ್ತೆತಡೆ ಉಂಟಾಗಿ ಸಂಚಾರ ಭೀತಿ ಉಂಟುಮಾಡಿದೆ.
ಬೇಳ ಕುಮಾರಮಂಗಲ, ವಿಷ್ಣುಮೂರ್ತಿ ನಗರ, ನೀರ್ಚಾಲು ಕೆಳಗಿನ ಪೇಟೆ, ಕನ್ನೆಪ್ಪಾಡಿ ಮತ್ತು ಕಾಂತಿಲ ಪ್ರದೇಶಗಳಲ್ಲಿ ಅಕ್ಷರಶಃ ಕೆಸರು ಗದ್ದೆ ನಿರ್ಮಾಣವಾಗಿದೆ. ಆರ್.ಡಿ.ಎಸ್ ಪ್ರೊಜೆಕ್ಟ್ ಯೋಜನೆ ಕ್ಯೆಗೆತ್ತಿಕೊಂಡಿದ್ದರೂ, ಈ ವರೆಗೆ ನಾಗರಿಕರಿಗೆ ನ್ಯಾಯ ಒದಗಿಸಲು ಸಂಪೂರ್ಣ ಸೋತುಹೋಗಿದೆ. ಈ ಬಗ್ಗೆ ವಾರಗಳ ಹಿಂದೆ ಸಮರಸ ಸುದ್ದಿ ಸಮಗ್ರ ವರದಿಯನ್ನೂ ಪ್ರಕಟಿಸಿತ್ತು.