HEALTH TIPS

"ಕೇರಳದಲ್ಲಿ ಸಾಮ್ರಾಜ್ಯಶಾಹಿತ್ವ ಕೊನೆಗೊಂಡಿಲ್ಲ" ಎಂದ ಎಚ್.ಆರ್.ಡಿ.ಎಸ್. ಕಾರ್ಯದರ್ಶಿ ಅಜಿ ಕೃಷ್ಣನ್: ಸ್ವಪ್ನಾಗೆ ಕೆಲಸ ನೀಡಿದಕ್ಕಾಗಿ ಎಚ್.ಆರ್.ಡಿ.ಎಸ್.ನ್ನು ಬೇಟೆಯಾಡಲಾಗುತ್ತಿದೆ ಎಂದು ಆರೋಪ

                    ಪಾಲಕ್ಕಾಡ್: ಕೇರಳದಲ್ಲಿ ರಾಜಪ್ರಭುತ್ವ ಇನ್ನೂ ಕೊನೆಗೊಂಡಿಲ್ಲ ಎಂದು ಎಚ್ ಆರ್ ಡಿ ಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ಹೇಳಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದ ಸ್ವಪ್ನಾ ಸುರೇಶ್ ಅವರನ್ನು ನಾವು ನೇಮಿಸಿಕೊಂಡಿದ್ದರಿಂದ ಎಚ್ ಆರ್ ಡಿ ಎಸ್ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಹೇಳಿದರು. ಜಾಮೀನು ಪಡೆದ ನಂತರ ಎಚ್ ಆರ್ ಡಿ ಎಸ್ ಕಾರ್ಯದರ್ಶಿ ಅಜಿ ಕೃಷ್ಣನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

                    ಎಲ್ಲಾ ವರ್ಗದ ಜನರು ಎಚ್ ಆರ್ ಡಿ ಎಸ್‍ನಲ್ಲಿ ಕೆಲಸ ಮಾಡುತ್ತಿದ್ದರೂ ಅದು ಆರ್‍ಎಸ್‍ಎಸ್ ಪರ ಸಂಘಟನೆ ಎಂಬ ಹಣೆಪಟ್ಟಿ ಹೊಂದಿದೆ. ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಪ್ರಸ್ತಾಪಿಸಿದಂತೆ, ಎಚ್ ಆರ್ ಡಿ ಎಸ್ ಹತ್ತು ಅರಣ್ಯವಾಸಿಗಳ ಗುಡಿಸಲುಗಳನ್ನು ಸುಟ್ಟುಹಾಕಿದ್ದರೆ, ಅದು ಕೇರಳದಲ್ಲಿ ಬೆಂಕಿಯ ವೇಗದ ಸುದ್ದಿಯಾಗುತ್ತಿತ್ತು. ದೂರು ಸ್ವೀಕರಿಸಿ ಒಂದೂವರೆ ವರ್ಷದ ನಂತರ ಪ್ರಕರಣ ದಾಖಲಿಸಿರುವ ಕ್ರಮ ಸರ್ಕಾರದ ಸೇಡಿನ ತಂತ್ರದ ಭಾಗವೇ ಆಗಿದ್ದು, ದೂರು ನೀಡಿದವರ ಪರಿಚಯವೂ ಇಲ್ಲ ಎಂದು ಅಜಿ ಕೃಷ್ಣನ್ ಪ್ರತಿಕ್ರಿಯಿಸಿದ್ದಾರೆ.

                 ಅರಣ್ಯವಾಸಿಗಳನ್ನು ಒತ್ತುವರಿ ಮಾಡಿ ಅವರ ಜಮೀನು ಕಬಳಿಸಿದ ಪ್ರಕರಣದಲ್ಲಿ ಅಜಿ ಕೃಷ್ಣನ್ ಅವರನ್ನು ಬಂಧಿಸಲಾಗಿತ್ತು. ನಂತರ ನಿನ್ನೆ ಮನ್ನಾಕ್ರ್ಕಾಡ್ ಎಸ್‍ಸಿ-ಎಸ್‍ಟಿ ನ್ಯಾಯಾಲಯ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದೆ. 1 ಲಕ್ಷ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ ಇದೆ. ಪಾಸ್ ಪೆÇೀರ್ಟ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಮತ್ತು ಎರಡು ತಿಂಗಳವರೆಗೆ ಅಟ್ಟಪಾಡಿ ಪ್ರವೇಶಿಸಬಾರದು ಎಂದು ಷರತ್ತಿನಲ್ಲಿ  ತಿಳಿಸಲಾಗಿದೆ. ಪ್ರತಿ ಶನಿವಾರ ಶೋಲಾಯರ್ ಪೋಲೀಸ್ ಠಾಣೆಗೆ ಬಂದು ಸಹಿ ಮಾಡಬೇಕು ಎಂದೂ ಕೋರ್ಟ್ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries