ಕುಂಬಳೆ: ಪುತ್ತಿಗೆ ಮುಗು ನಿವಾಸಿ ಅಬೂಬಕರ್ ಸಿದ್ದಿಕ್ ಕೊಲೆ ಪ್ರಕರಣದಲ್ಲಿ ಇನ್ನೂ ಮೂವರನ್ನು ಬಂಧಿಸಲಾಗಿದೆ. ಕಾಸರಗೋಡು ಡಿವೈಎಸ್ಪಿ ಪಿ.ಬಾಲಕೃಷ್ಣನ್ ನಾಯರ್ ಮತ್ತು ತಂಡ ಮಂಜೇಶ್ವರ ಉದ್ಯಾವರ ಜೆಎಂ ರಸ್ತೆಯ ರಝಿನಾ ಮನ್ಸಿಲ್ ರಿಯಾಝ್ ಹಸನ್ (33), ನ್ಯೂ ರಹಮತ್ ಮನ್ಸಿಲ್ ಉಪ್ಪಳ ಭಗವತಿ ದೇವಸ್ಥಾನ ರಸ್ತೆಯ ಅಬ್ದುಲ್ ರಝಾಕ್ (46), ಕುಂಜತ್ತೂರು ನವಾಝ್ ಮನ್ಸಿಲ್ನ ಅಬೂಬಕರ್ ಸಿದ್ದೀಕ್ (33) ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಈ ಹಿಂದೆ ಬಂಧಿತರಾದ ಉದ್ಯಾವರ ಜೆಎಂ ರಸ್ತೆಯ ಕನ್ನಪ್ಪಬಕ್ ಹೌಸ್ನ ಅಬ್ದುಲ್ ಅಜೀಜ್ (36), ಉದ್ಯಾವರ ಜೆಎಂ ರಸ್ತೆಯ ರವೂಫ್ ರಹೀಮ್ ಮಂಜಿಲ್ನ ಅಬ್ದುಲ್ ರಹೀಮ್ (41) ಸೇರಿದಂತೆ ಈವರೆಗೆ ಒಟ್ಟು ಐವರನ್ನು ಬಂಧಿಸಲಾಗಿದೆ.