HEALTH TIPS

ತನ್ನದೇ ಪಕ್ಷದ ಕಚೇರಿಯನ್ನು ರಕ್ಷಿಸಲು ಸಾಧ್ಯವಾಗದ ಮುಖ್ಯಮಂತ್ರಿ ಜನರನ್ನು ಹೇಗೆ ರಕ್ಷಿಸುತ್ತಾರೆ: ವಿ.ಮುರಳೀಧರನ್

         ಕೊಚ್ಚಿ: ಎಕೆಜಿ ಕೇಂದ್ರದ ಮೇಲೆ ಸ್ಥಳೀಯ ಪಟಾಕಿ ಸಿಡಿಸಿದ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿ.ಮುರಳೀಧರನ್ ಸಿಪಿಎಂ ಮತ್ತು ಸರ್ಕಾರವನ್ನು ಟೀಕಿಸಿದರು. ಸಚಿವಾಲಯದ ಸಮೀಪವೇ ಇಂತಹ ಹಿಂಸಾಚಾರ ನಡೆಯುತ್ತಿರುವಾಗ ಕೇರಳದ ಪೋಲೀಸ್ ವ್ಯವಸ್ಥೆ ಏನು ಮಾಡುತ್ತಿದೆ ಎಂದು ಸಚಿವರು ಪ್ರಶ್ನಿಸಿದರು. ಆಡಳಿತ ಪಕ್ಷಕ್ಕೆ ತಮ್ಮ ಪಕ್ಷದ ಕಚೇರಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಜನರ ರಕ್ಷಣೆ ಹೇಗೆ ಎಂದು ಪ್ರಶ್ನಿಸಿದರು.

                  ಕೇರಳದ ಆಡಳಿತ ವ್ಯವಸ್ಥೆ ಹದಗೆಟ್ಟ ಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಗೃಹ ಇಲಾಖೆಯನ್ನೂ ನಿಭಾಯಿಸುವ ವ್ಯಕ್ತಿ. ಕೇರಳದ ಪೋಲೀಸ್ ವ್ಯವಸ್ಥೆಯನ್ನು ಮಾಕ್ರ್ಸ್ ವಾದಿ ಪಕ್ಷದ ಪುಂಡರ ಹಿಡಿತದಲ್ಲಿಟ್ಟು ಸರಕಾರ ಪೋಲೀಸರ ನೈತಿಕ ಸ್ಥೈರ್ಯವನ್ನು ಬರಿದು ಮಾಡಿದೆ. ಇದರಿಂದ ಪೋಲೀಸ್ ಪಡೆ ಅಸಮರ್ಥವಾಗಿ ಕೆಲಸ ಮಾಡಬೇಕಾಗಿದೆ ಎಂದೂ ವಿ.ಮುರಳೀಧರನ್ ಆರೋಪಿಸಿದರು. ತಮ್ಮ ಸಾಮಥ್ರ್ಯಕ್ಕೆ ಧಕ್ಕೆಯಾಗಿದೆ ಎಂಬುದನ್ನು ಮುಖ್ಯಮಂತ್ರಿಗಳೇ ಒಪ್ಪಿಕೊಳ್ಳಬೇಕು ಎಂದರು.

                ಗೃಹ ಇಲಾಖೆಯನ್ನು ಬೇರೆಯವರಿಗೆ ವಹಿಸುವುದು ಉತ್ತಮ. ಸಿಪಿಎಂ-ಕಾಂಗ್ರೆಸ್ ಪಕ್ಷಗಳು ಜನರಿಗೆ ತೊಂದರೆ ನೀಡುತ್ತಿವೆ. ಆರೋಪಿಗಳನ್ನು ಪತ್ತೆ ಹಚ್ಚಲು ಪೋಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ. ಇಪಿ ಜಯರಾಜನ್  ಅಸಮರ್ಥ ಎಂದು ಹೇಳಬೇಕು. ಸೆಕ್ರೆಟರಿಯೇಟ್ ಪಕ್ಕದಲ್ಲಿ ನಡೆದ ಸ್ಫೋಟದ ಬಗ್ಗೆ ಗೃಹ ವ್ಯವಹಾರಗಳನ್ನು ನಿರ್ವಹಿಸುತ್ತಿರುವ ಮುಖ್ಯಮಂತ್ರಿಗೆ ಏನೂ ಮಾಡಲು ಸಾಧ್ಯವಾಗುತ್ತಿಲ್ಲ ಎಂದರೆ ಅದು ಪಿಣರಾಯಿ ವಿಜಯನ್ ಅವರ ವೈಫಲ್ಯ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries