HEALTH TIPS

ಶಾಸಕಾಂಗವನ್ನು ದಾರಿ ತಪ್ಪಿಸಲಾಯಿತು; ಮುಖ್ಯಮಂತ್ರಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಮಂಡಿಸಿದ ಶಾಸಕ ಮ್ಯಾಥ್ಯೂ ಕುಳನಾಡನ್

             ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಶಾಸಕ ಮ್ಯಾಥ್ಯೂ ಕುಳನಾಡನ್ ಹಕ್ಕು ಚ್ಯುತಿ  ನೋಟಿಸ್ ಜಾರಿ ಮಾಡಿದ್ದಾರೆ. ಚಿನ್ನಾಭರಣ ಕಳ್ಳಸಾಗಣೆ ಪ್ರಕರಣದ ಆರೋಪಿಗಳ ಗೌಪ್ಯ ಬಹಿರಂಗಪಡಿಸುವಿಕೆ ಸಂಬಂಧಿಸಿದ ತುರ್ತು ನಿರ್ಣಯದ ಚರ್ಚೆಯ ವೇಳೆ ಅಸತ್ಯ ಮಾತುಗಳನ್ನು ಹೇಳಿ ಸದನವನ್ನು ದಿಕ್ಕು ತಪ್ಪಿಸಲಾಗಿದೆ ಎಂದು ನೋಟಿಸ್ ತೋರಿಸುತ್ತದೆ. ಸದನ ಮತ್ತು ಸದಸ್ಯರನ್ನು ದಿಕ್ಕು ತಪ್ಪಿಸುತ್ತಿರುವ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಳನಾಡನ್ ಸ್ಪೀಕರ್‍ಗೆ ನೀಡಿರುವ ನೋಟಿಸ್‍ನಲ್ಲಿ ಆಗ್ರಹಿಸಿದ್ದಾರೆ.

               ವಿಧಾನಮಂಡಲದ ಕಾರ್ಯವಿಧಾನ ಮತ್ತು ಆಡಳಿತದ ಕುರಿತು ನಿಯಮ 154 ರ ಅಡಿಯಲ್ಲಿ ನೋಟೀಸ್ ನೀಡಲಾಗಿದೆ.  ತುರ್ತು ನಿರ್ಣಯದ ಚರ್ಚೆಯಲ್ಲಿ ಮುಖ್ಯಮಂತ್ರಿ ಪುತ್ರಿ ವೀಣಾ ವಿಜಯನ್ ವಿರುದ್ಧ ಶಾಸಕ ಮ್ಯಾಥ್ಯೂ ಕುಳನಾಡನ್ ಆರೋಪ ಮಾಡಿದರು. ವೀಣಾ ಒಡೆತನದ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಕಂಪನಿಯ ವೆಬ್‍ಸೈಟ್‍ನಲ್ಲಿ ಪ್ರೈಸ್ ವಾಟರ್ ಹೌಸ್ ಕೂಪರ್ಸ್‍ನ ನಿರ್ದೇಶಕ ಜೇಕ್ ಬಾಲಕುಮಾರ್ ಅವರ ಮಾರ್ಗದರ್ಶಕ ಎಂದು ಹೇಳಲಾಗಿದೆ ಎಂದು ಮ್ಯಾಥ್ಯೂ ಕುಳನಾಡನ್ ಸಭೆಯ ಗಮನಕ್ಕೆ ತಂದರು. ನಂತರ ಆ ವೆಬ್ ಸೈಟ್  ತೆಗೆದುಹಾಕಲಾಗಿದೆ ಎಂದು ಹೇಳಿದರು.

               ತುರ್ತು ನಿರ್ಣಯದ ಚರ್ಚೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮ್ಯಾಥ್ಯೂ ಕುಳನಾಡನ್ ಅವರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಅಸತ್ಯವಾದ ವಿಷಯಗಳನ್ನು ಮಂಡಿಸಿ ಏನಾದರೂ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಆದರೆ ವೆಬ್‍ಸೈಟ್‍ನ ಆರ್ಕೈವ್ ದಾಖಲೆಗಳ ಪ್ರಕಾರ, ಮೇ 20, 2020 ರವರೆಗೆ, ಕಂಪನಿಯ ವೆಬ್‍ಸೈಟ್‍ನಲ್ಲಿ, ಜೇಕ್ ಬಾಲಕುಮಾರ್ ಅವರು ಕಂಪನಿಯ ಸಂಸ್ಥಾಪಕರ ಮಾರ್ಗದರ್ಶಕರು ಎಂದು ದಾಖಲಿಸಲಾಗಿದೆ ಎಂದು ಮ್ಯಾಥ್ಯೂ ಕುಳನಾಡನ್  ಹೇಳಿದರು.

               ಈ ಹಿಂದೆ ಸಂದರ್ಶನವೊಂದರಲ್ಲಿ ವೀಣಾ ಅವರು ಜೇಕ್ ಬಾಲಕುಮಾರ್ ಬಗ್ಗೆ ಮಾತನಾಡಿದ್ದರು. ಇದಕ್ಕೆ ಸಾಕ್ಷಿಯನ್ನೂ ಮ್ಯಾಥ್ಯೂ ಕುಳನಾಡನ್ ಅವರು  ಸ್ಪೀಕರ್ ಗೆ ಹಕ್ಕು ಚ್ಯುತಿ  ಉಲ್ಲಂಘನೆಯ ನೋಟಿಸ್  ನೀಡಿದರು. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries