ಉಪ್ಪಳ: ಭಾರತ ಸರಕಾರದ ವಿಶಿಷ್ಟ ಯೋಜನೆಯಾದ ಯುವಕರನ್ನು ಸೇನೆಗೆ ಸೇರಿಸುವ “ ಅಗ್ನಿವೀರ್ ಆರ್ಮಿ” ಗೆ ಅರ್ಜಿ ಸಲ್ಲಿಸಿದ ಮತ್ತು ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳಿಗೆ ಡಿ.1. ರಿಂದ 30 ದಿನಗಳ ದೈಹಿಕ ತರಬೇತಿ ಶಿಬಿರವನ್ನು ಕೊಂಡೆವೂರಿನ ಜಗದ್ಗುರು ಶ್ರೀ ನಿತ್ಯಾನಂದ ಮಹಾಪೀಠಮ್ ಚಾರಿಟೇಬಲ್ ಟ್ರಸ್ಟ್, ದ್ರೋಣಾಚಾರ್ಯ ಅಕಾಡೆಮಿ ಕಾಞಂಗಾಡ್ ಇವರ ಸಹಕಾರದೊಂದಿಗೆ ಆಯೋಜಿಸಿದೆ. ಈ ಶಿಬಿರಕ್ಕೆ ಆಸಕ್ತ ಅಭ್ಯರ್ಥಿಗಳ ಆಯ್ಕೆಯು ದಿ. 21.8.2022 ಆದಿತ್ಯವಾರ ಬೆ.9.00 ಗಂಟೆಗೆ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠ, ಕೊಂಡೆವೂರುÀ, ಉಪ್ಪಳದಲ್ಲಿ ಜರಗಲಿದೆ. ಆಸಕ್ತ ಅಭ್ಯರ್ಥಿಗಳು 1.ಎಸ್.ಎಸ್.ಎಲ್.ಸಿ ಪ್ರಮಾಣ ಪತ, 2. ರೇಶನ್ ಕಾರ್ಡಿನ ಪ್ರತಿ., 3)ಆಧಾರ್ ಕಾರ್ಡ್,
4. ಪಾಸ್ಪೋರ್ಟ್ ಅಳತೆಯ ಒಂದು ಭಾವಚಿತ್ರ.5. ಅಗ್ನಿವೀರರಾಗಲು ಸಲ್ಲಿಸಿದ ಅರ್ಜಿಯ ದಾಖಲೆ ಪ್ರತಿ.( ಈಗಾಗಲೇ ಅರ್ಜಿ ಸಲ್ಲಿಸಿದ್ದಲ್ಲಿ) ಸಲ್ಲಿಸಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಕಾಲ ನಡೆಯಲಿರುವ ಈ ಶಿಬಿರದ ಸಮಯದಲ್ಲಿ ಉಚಿತವಾಗಿ ಊಟ ಮತ್ತು ವಸತಿಯನ್ನು ಏರ್ಪಡಿಸಿದೆ ಎಂದೂ ಆಶ್ರಮದ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 9496857851 ಅಥವಾ +919902875816 ನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಕೊಂಡೆವೂರಿನಲ್ಲಿ ‘ಅಗ್ನಿವೀರ’ರಿಗೆ 30 ದಿನಗಳ ಉಚಿತ ದೈಹಿಕ ತರಬೇತಿ ಶಿಬಿರ
0
August 19, 2022
Tags