HEALTH TIPS

ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದ ಯುವತಿಗೆ ರೈಲ್ವೆ ರಿಪೇರಿ ವ್ಯಾನ್​ ಡಿಕ್ಕಿ: ಸ್ಥಳದಲ್ಲೇ ದುರ್ಮರಣ

 

              ಕೊಚ್ಚಿ: ರೈಲು ಹಳಿ ದಾಟುವಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು 21 ವರ್ಷದ ಯುವತಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಅಂಗಮಾಲಿ ರೈಲು ನಿಲ್ದಾಣದಲ್ಲಿ ಶುಕ್ರವಾರ (ಆ.12) ನಡೆದಿದೆ.

                  ಮೃತ ಯುವತಿಯನ್ನು ಅನು ಸಾಜನ್​ ಎಂದು ಗುರುತಿಸಲಾಗಿದೆ.

ಈಕೆ ಅಂಗಮಾಲಿ ಪೀಚನಿಕಾದ್​ ಥೇಲಪಿಲ್ಲಿಯ ನಿವಾಸಿ. ಅಲುವಾದಿಂದ ಬರುತ್ತಿದ್ದ ರೈಲನ್ನು ನೋಡಿ ಮತ್ತೊಂದು ಹಳಿಗೆ ಹೋಗುವಾಗ ಚಲಕುಡಿಯಿಂದ ಅಲುವಾ ಕಡೆ ಹೋಗುತ್ತಿದ್ದ ರೈಲ್ವೆ ರಿಪೇರಿ ವ್ಯಾನ್​ ಡಿಕ್ಕಿ ಹೊಡೆಯಿತು. ಪರಿಣಾಮ ಕೆಳಗೆ ಬಿದ್ದ ಯುವತಿಯ ತಲೆಗೆ ಕಬ್ಬಿಣದ ರಾಡ್​ ಹೊಡೆದು ದುರಂತ ಸಾವಿಗೀಡಾಗಿದ್ದಾಳೆ.

                     ಅನು ಅಂಗಮಾಲಿ ಮಾರ್ನಿಂಗ್​ ಸ್ಟಾರ್​ ಕಾಲೇಜಿನ ವಿದ್ಯಾರ್ಥಿನಿ. ಪುರಸಭೆ ಬಸ್ ನಿಲ್ದಾಣದಲ್ಲಿ ಇಳಿಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹಳಿ ದಾಟಿದ ನಂತರ ಸಮೀಪದ ಕಾಲೇಜುಗಳಿಗೆ ಹೋಗುತ್ತಾರೆ. ಹೀಗೆ ದಾಟುವಾಗ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

                   ಕಳೆದ ಜುಲೈ 23ರಂದು ಇದೇ ರೀತಿಯ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿತ್ತು. ರೈಲ್ವೆ ಕ್ರಾಸ್​ ದಾಟುವಾಗ ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದಳು. ಮೃತ ವಿದ್ಯಾರ್ಥಿನಿ ಹೆಸರು ನಂದಿತಾ. ಕಣ್ಣೂರಿನ ಕಾಕ್ಕಡ್​ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಂದಿತಾ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಕಣ್ಣೂರು ಕಡೆಗೆ ಹೊರಟ್ಟಿದ್ದ ಪರುಶುರಾಮ್​ ಎಕ್ಸ್​ಪ್ರೆಸ್​ ನಂದಿತಾಳಿಗೆ ಡಿಕ್ಕಿ ಹೊಡೆದಿತ್ತು.

                  ನಂದಿತಾ ರೈಲ್ವೆ ಕ್ರಾಸಿಂಗ್​ ದಾಟಿದ್ದಳು. ಆದರೆ, ಆಕೆಯ ಬ್ಯಾಗ್​ ರೈಲಿಗೆ ಸಿಲುಕಿದ್ದರಿಂದ ಆಕೆ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ದುರಂತದ ಸಂಗತಿಯೆಂದರೆ, ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದರು. ಕಣ್ಣ ಎದುರಲ್ಲೇ ಮಗಳ ದುರ್ಮರಣವು ತಾಯಿಯ ಮನಸ್ಸನ್ನು ನುಚ್ಚು ನೂರು ಮಾಡಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries