HEALTH TIPS

ರೈಲು ಬಂತೆಂದು ಮತ್ತೊಂದು ಹಳಿಯತ್ತ ಓಡಿದ ಯುವತಿಗೆ ರೈಲ್ವೆ ರಿಪೇರಿ ವ್ಯಾನ್​ ಡಿಕ್ಕಿ: ಸ್ಥಳದಲ್ಲೇ ದುರ್ಮರಣ

 

              ಕೊಚ್ಚಿ: ರೈಲು ಹಳಿ ದಾಟುವಾಗ ರೈಲ್ವೆ ರಿಪೇರಿ ವಾಹನ ಡಿಕ್ಕಿ ಹೊಡೆದು 21 ವರ್ಷದ ಯುವತಿ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಅಂಗಮಾಲಿ ರೈಲು ನಿಲ್ದಾಣದಲ್ಲಿ ಶುಕ್ರವಾರ (ಆ.12) ನಡೆದಿದೆ.

                  ಮೃತ ಯುವತಿಯನ್ನು ಅನು ಸಾಜನ್​ ಎಂದು ಗುರುತಿಸಲಾಗಿದೆ.

ಈಕೆ ಅಂಗಮಾಲಿ ಪೀಚನಿಕಾದ್​ ಥೇಲಪಿಲ್ಲಿಯ ನಿವಾಸಿ. ಅಲುವಾದಿಂದ ಬರುತ್ತಿದ್ದ ರೈಲನ್ನು ನೋಡಿ ಮತ್ತೊಂದು ಹಳಿಗೆ ಹೋಗುವಾಗ ಚಲಕುಡಿಯಿಂದ ಅಲುವಾ ಕಡೆ ಹೋಗುತ್ತಿದ್ದ ರೈಲ್ವೆ ರಿಪೇರಿ ವ್ಯಾನ್​ ಡಿಕ್ಕಿ ಹೊಡೆಯಿತು. ಪರಿಣಾಮ ಕೆಳಗೆ ಬಿದ್ದ ಯುವತಿಯ ತಲೆಗೆ ಕಬ್ಬಿಣದ ರಾಡ್​ ಹೊಡೆದು ದುರಂತ ಸಾವಿಗೀಡಾಗಿದ್ದಾಳೆ.

                     ಅನು ಅಂಗಮಾಲಿ ಮಾರ್ನಿಂಗ್​ ಸ್ಟಾರ್​ ಕಾಲೇಜಿನ ವಿದ್ಯಾರ್ಥಿನಿ. ಪುರಸಭೆ ಬಸ್ ನಿಲ್ದಾಣದಲ್ಲಿ ಇಳಿಯುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಹಳಿ ದಾಟಿದ ನಂತರ ಸಮೀಪದ ಕಾಲೇಜುಗಳಿಗೆ ಹೋಗುತ್ತಾರೆ. ಹೀಗೆ ದಾಟುವಾಗ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

                   ಕಳೆದ ಜುಲೈ 23ರಂದು ಇದೇ ರೀತಿಯ ಘಟನೆ ಕೇರಳದ ಕಣ್ಣೂರಿನಲ್ಲಿ ನಡೆದಿತ್ತು. ರೈಲ್ವೆ ಕ್ರಾಸ್​ ದಾಟುವಾಗ ರೈಲು ಡಿಕ್ಕಿ ಹೊಡೆದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಥಳದಲ್ಲೇ ದುರಂತ ಸಾವಿಗೀಡಾಗಿದಳು. ಮೃತ ವಿದ್ಯಾರ್ಥಿನಿ ಹೆಸರು ನಂದಿತಾ. ಕಣ್ಣೂರಿನ ಕಾಕ್ಕಡ್​ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ನಂದಿತಾ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದಳು. ಕಣ್ಣೂರು ಕಡೆಗೆ ಹೊರಟ್ಟಿದ್ದ ಪರುಶುರಾಮ್​ ಎಕ್ಸ್​ಪ್ರೆಸ್​ ನಂದಿತಾಳಿಗೆ ಡಿಕ್ಕಿ ಹೊಡೆದಿತ್ತು.

                  ನಂದಿತಾ ರೈಲ್ವೆ ಕ್ರಾಸಿಂಗ್​ ದಾಟಿದ್ದಳು. ಆದರೆ, ಆಕೆಯ ಬ್ಯಾಗ್​ ರೈಲಿಗೆ ಸಿಲುಕಿದ್ದರಿಂದ ಆಕೆ ರೈಲಿನ ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಳು. ದುರಂತದ ಸಂಗತಿಯೆಂದರೆ, ನಂದಿತಾ ರೈಲಿಗೆ ಸಿಲುಕಿದಾಗ ಆಕೆಯ ತಾಯಿ ಮತ್ತೊಂದು ರೈಲು ದ್ವಾರದ ಬಳಿ ನಿಂತಿದ್ದರು. ಕಣ್ಣ ಎದುರಲ್ಲೇ ಮಗಳ ದುರ್ಮರಣವು ತಾಯಿಯ ಮನಸ್ಸನ್ನು ನುಚ್ಚು ನೂರು ಮಾಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries