ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ‘ಅನ್ನ” ಯೋಜನೆಯ ‘ಧಾನ್ಯಲಕ್ಷ್ಮೀ ಕೃಷಿ ಯೋಜನೆ’ಯಡಿಯಲ್ಲಿ ಸಾವಯವ ಕೃಷಿ ಮೂಲಕ ಭತ್ತ ಬೆಳೆಸಲಾಗಿದ್ದು, ಕೃಷಿ ಆಸಕ್ತರನ್ನು ಸೇರಿಸಿ ಈ ಬೆಳೆಯನ್ನು ಕಟಾವು ಮಾಡುವ “ಕೊಯ್ಲು ಉತ್ಸವ” ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನ. 6 ರಂದು ಭಾನುವಾರ ನಡೆಯಲಿದೆ. ಮಂಜೇಶ್ವರ ತಾಲೂಕು ಉಪತಹಶೀಲ್ದಾರ ಸಿ.ಡೆಲಿ ಕುಮಾರ್, ಮಂಗಲ್ಪಾಡಿ ಗ್ರಾಮಪಂಚಾಯತಿ ಸದಸ್ಯರಾದ ಶರೀಫ್, ವಿಜಯಕುಮಾರ್ ಮತ್ತು ಶ್ರೀಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನಾಧಿಕಾರಿ ಮುಕೇಶ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು. ಬೆಳಿಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಗದ್ದೆಗೆ ಸಾಗಿ ನಡೆಯುವ ಕೃಷಿಜಾಗೃತಿಯ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜೊತೆಗೂಡಿ ಭಾಗವಹಿಸಿ ಬೆಂಬಲಿಸಬೇಕೆಂದು ಆಶ್ರಮದ ಪ್ರಕಟಣೆಯಲ್ಲಿ ವಿನಂತಿಸಿಕೊಳ್ಳಲಾಗಿದೆ.
ಕೊಂಡೆವೂರಿನಲ್ಲಿ ಕೊಯ್ಲು ಉತ್ಸವ 2022 ನಾಳೆ
0
ನವೆಂಬರ್ 04, 2022

