ಕೊಚ್ಚಿ: ಬಹುದಿನಗಳಿಂದ ಬಯಸಿದ್ದ ತನ್ನ ಪ್ರೀತಿಯ ಸೈಕಲ್ ಕಳಕೊಂಡಿದ್ದು ಹುಡುಕಾಟದಲ್ಲಿ ವಿದ್ಯಾರ್ಥಿಯೊಬ್ಬನ ಚೀಟಿ ವೈರಲ್ ಆಗಿದೆ.
ಕೊಚ್ಚಿ ಸ್ಟೇಡಿಯಂ ಮೆಟ್ರೋ ನಿಲ್ದಾಣದ ಹಿಂದೆ ಇರಿಸಲಾಗಿದ್ದ ಬೈಸಿಕಲ್ ಕಳ್ಳತನವಾಗಿದೆ. ತೇವರ ಎಸ್.ಎಚ್.ಶಾಲೆಯ ಪ್ಲಸ್ ಒನ್ ವಿದ್ಯಾರ್ಥಿ ಪಾವೆಲ್ ಸ್ಮಿತ್ ತನ್ನ ಸೈಕಲ್ ಗಾಗಿ ಅಲೆದಾಡಿ ಕೊನೆಗೆ ಜಾಹೀರಾತಿನ ರೀತಿಯ ನೋವು ಪ್ರಕಟಿಸಿ ವೈರಲ್ ಆಗಿದೆ.
ಆ.22ರಂದು ಸಂಜೆ 25 ಸಾವಿರ ಮೌಲ್ಯದ ಗೇರ್ ಸೈಕಲ್ ಕಳ್ಳತನವಾಗಿತ್ತು. ಈ ಕುರಿತು ಪೋಲೀಸರಿಗೆ ದೂರು ನೀಡಲಾಗಿದ್ದು, ಇದುವರೆಗೂ ಸೈಕಲ್ ಪತ್ತೆಯಾಗಿಲ್ಲ. ಎಲ್ಲ ದಾರಿಗಳು ಮುಚ್ಚಿಹೋಗಿವೆ ಎಂದು ಅನಿಸಿದಾಗ, ಸೈಕಲ್ ಕಳ್ಳತನವಾದ ಸ್ಥಳದಲ್ಲಿ ನೋಟೀಸ್ ಅಚಿಟಿಸಿ ಕಳ್ಳನಿಗೆ ಸೈಕಲ್ ಹಿಂದಿರುಗಿಸುವಂತೆ ಕೇಳಿರುವುದು ಗಮನಾರ್ಹವಾಗಿದೆ.
ನಾನು ಪಾವೆಲ್ ಸಮಿತ್ ಎಂಬವನಾಗಿದ್ದು ತೇವರ ಎಸ್.ಎಚ್.ಶಾಲೆಯಲ್ಲಿ ಓದುತ್ತಿದ್ದೇನೆ. ಬೆಳಗ್ಗೆ ಶಾಲೆಗೆ ತೆರಳುವಾಗ ಇಲ್ಲಿ ಸೈಕಲ್ ಬಿಟ್ಟುಹೋಗುವುದು ವಾಡಿಕೆ. ನಿನ್ನೆ ವಾಪಸ್ ಬರುವಷ್ಟರಲ್ಲಿ ಸೈಕಲ್ ನಾಪತ್ತೆಯಾಗಿತ್ತು. ಬಹಳ ಆಸೆಯಿಂದ ಖರೀದಿಸಿದ್ದೆ. ಅದನ್ನು ಕೊಂಡೊಯ್ದ ಸಹೋದರರು ವಾಪಸ್ ನೀಡುವಂತೆ ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ -ಪಾವೆಲ್ ಸಮಿತ್ 9037060798 ಎಂದು ನೋಟಿಸ್ ನಲ್ಲಿ ಬರೆಯಲಾಗಿದೆ. ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದ ಸ್ಟ್ರೀಮ್ ವರ್ಟಿಕಲ್ ನ ಸಿಇಒ ರಾಜಗೋಪಾಲ್ ಕೃಷ್ಣನ್ ಈ ನೋಟಿಸ್ ನ ಚಿತ್ರವನ್ನು ಫೇಸ್ ಬುಕ್ ನಲ್ಲಿ ಪೆÇೀಸ್ಟ್ ಮಾಡಿದ್ದು, ವಿದ್ಯಾರ್ಥಿಯ ಹುಡುಕಾಟ ವೈರಲ್ ಆಗಿದೆ.
ದಯವಿಟ್ಟು ಸೈಕಲ್ ವಾಪಸ್ ಕೊಡಿ: ಮೆಟ್ರೋ ನಿಲ್ದಾಣದಲ್ಲಿ ಕದ್ದ ಬೈಸಿಕಲ್ನ ಹುಡುಕಾಟದಲ್ಲಿ ವಿದ್ಯಾರ್ಥಿಯ ಟಿಪ್ಪಣಿ: ವೈರಲ್
0
December 02, 2022