ತಿರುವನಂತಪುರಂ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಹಕ್ಕಿಜ್ವರದ ಶಂಕೆ ಕಂಡುಬಂದಿದ್ದು, ಆರೋಗ್ಯ ಇಲಾಖೆ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ತಿರುವನಂತಪುರ ಜಿಲ್ಲೆಯ ಅಜೂರ್ ಗ್ರಾಮ ಪಂಚಾಯಿತಿಯಲ್ಲಿ ಹಕ್ಕಿಜ್ವರ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಆಜೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಇಂದಿನಿಂದ ಪಕ್ಷಿಗಳ ಮಾರಣಹೋಮ ಆರಂಭಗೊಂಡಿತು. ಅಜೂರ್ ಪೆರುಂಗುಝಿ ವಾರ್ಡ್ನಲ್ಲಿ ನಡೆಯುತ್ತಿರುವ ಕೋಳಿ ಫಾರಂನಲ್ಲಿ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದ ಬಾತುಕೋಳಿಗಳನ್ನು ಭೋಪಾಲ್ನ ಎನ್ಐಎಚ್ಎಸ್ಎಡಿ ಲ್ಯಾಬ್ನಲ್ಲಿ ಪರೀಕ್ಷಿಸಿದಾಗ ರೋಗ ದೃಢಪಟ್ಟಿದೆ.
ಅಜೂರು ಪಂಚಾಯಿತಿಯಲ್ಲಿ ಕಂದಾಯ, ಆರೋಗ್ಯ ಇಲಾಖೆ, ಪೆÇಲೀಸ್, ಅಗ್ನಿಶಾಮಕ ದಳ, ಪಂಚಾಯಿತಿ ಅಧಿಕಾರಿಗಳು ಜಿಲ್ಲಾಧಿಕಾರಿ ನೇತೃತ್ವದಲ್ಲಿ ತುರ್ತು ಸಭೆ ನಡೆಸಿ ವಿಪತ್ತು ನಿರ್ವಹಣಾ ಪಡೆ ನೇತೃತ್ವದಲ್ಲಿ ಹಕ್ಕಿಜ್ವರ ಎದುರಿಸಲು ಹಾಗೂ ಜನರಿಗೆ ತಿಳಿವಳಿಕೆ ನೀಡಲು ನಿರ್ಧರಿಸಲಾಯಿತು.
ಹಕ್ಕಿ ಜ್ವರ: ಜಿಲ್ಲೆಗಳಿಗೆ ಆರೋಗ್ಯ ಇಲಾಖೆ ಎಚ್ಚರಿಕೆ
0
January 09, 2023